ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

'ಕುಟುರ ಮತ್ತು ಕುಟಿಗ'ರ ಜಗಳ

ಶ್ರೀಕಾಂತ ಬರೆದಿರುವ ಕುಟುರ ಪಕ್ಷಿ ಮತ್ತು ಮೈನಾ ಪಕ್ಷಿಯ ಜಗಳ ಓದಿದ ನಂತರ ನನಗೂ ಇಂತಹದೇ ಇನ್ನೊಂದು ಘಟನೆ ನೆನಪಿಗೆ ಬಂತು. ಸುಮಾರು ಐದಾರು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪೆನಿ ಒಂದು ಟೆಕ್‌ಪಾರ್ಕ್‌‍‌ನಲ್ಲಿ ಕೆಂಗೇರಿ ಬಳಿ ಮೈಸೂರು ರಸ್ತೆಯಲ್ಲಿತ್ತು. ಆ ಟೆಕ್‌ಪಾರ್ಕ್ ಮೊದಲು ಒಂದು ತೋಟವಾಗಿತ್ತು. ಆ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡದೆ ಕೆಲವು ಮರಗಳನ್ನು ಹಾಗೆ ಉಳಿಸಿಕೊಳ್ಳಲಾಗಿತ್ತು. ಹಾಗಾಗಿ ಆ ಟೆಕ್‌ಪಾರ್ಕ್ ಇತರ ಟೆಕ್‌ಪಾರ್ಕ್‌ಗಳಂತೆ ಕೃತಕವಾಗಿರದೆ ನೈಜವಾಗಿತ್ತು.

ಹಾರುವ ಓತಿ

 ಪೂರ್ಣ ಚಂದ್ರ ತೇಜಸ್ವಿಯವರ 'ಕರ್ವಾಲೋ' ಕಾದಂಬರಿಯಲ್ಲಿ ಬರುವ ಹಾರುವ ಓತಿ Reptelia ವರ್ಗಕ್ಕೆ ಸೇರಿದ Draco ಎಂಬ Genusನ ಒಂದು ಪ್ರಭೇಧ. ಜಗತ್ತಿನಲ್ಲಿ ಇದುವರೆವಿಗೂ ಸುಮಾರು ನಲವತ್ತಮೂರು ಪ್ರಭೇಧಗಳ ಹಾರು ಓತಿಯನ್ನು ಗುರುತಿಸಲಾಗಿದೆ. ಈ ಎಲ್ಲಾ ಪ್ರಭೇಧಗಳೂ ಭಾರತದ ಪಶ್ಚಿಮ ಘಟ್ಟದಿಂದ ಹಿಡಿದು ಈಶಾನ್ಯ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಮ್, ಕಾಂಬೋಡಿಯಾ, ಚೀನಾದ ದಕ್ಷಿಣ ಭಾಗ, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಹರಡಿಕೊಂಡಿದೆ. ಪಶ್ಚಿಮ ಘಟ್ಟದ ಹೆಚ್ಚಿನ ಎಲ್ಲಾ ಭಾಗ ಮತ್ತು ಪೂರ್ವ ಘಟ್ಟಗಳ ಕೆಲವು ಭಾಗಗಳಲ್ಲಿ ಮಾತ್ರ ಕಾಣುವ ಏಕೈಕ ಪ್ರಭೇಧ Draco dussumieri. ಕರ್ನಾಟಕದಲ್ಲಿ ಸ್ಥಳೀಯವಾಗಿ 'ಹಾರುವ ಓತಿ' (ನಿಜವಾಗಿಯೂ ಅವು ಹಾರುವುದಿಲ್ಲ, ತಮ್ಮ ಪೊರೆಯಂತಹ ತೊಗಲಿನ ಸಹಾಯದಿಂದ ಗಾಳಿಯಲ್ಲಿ ತೇಲುತ್ತವೆ) ಎಂದೇ ಕರೆಸಿಕೊಳ್ಳುವ ಇದು IUCN Red Listನಂತೆ (ಜಾಗತಿಕವಾಗಿ ಜೀವಿ ಪ್ರಭೇಧವೊಂದರ ಸಂರಕ್ಷಣಾ ಸ್ಥಿತಿಯನ್ನು ತಿಳಿಸುವ ಪಟ್ಟಿ) Least Concern ಆಗಿದೆ. ಗಂಡು ಹಾರು ಓತಿ ತನ್ನ ವಾಸಕ್ಷೇತ್ರ ಕಾಯ್ದುಕೊಳ್ಳುವ ಬಗ್ಗೆ ಆಕ್ರಮಣಕಾರಿಯಾಗಿರುತ್ತದೆ. ಹಲವು ಹೆಣ್ಣುಗಳ ವಾಸಕ್ಷೇತ್ರಗಳನ್ನು ಒಳಗೊಂಡ ಗಂಡು ಓತಿಯ ವಾಸಕ್ಷೇತ್ರ ಹಲವಾರು ಮರಗಳನ್ನು ಒಳಗೊಂಡಿರುತ್ತದೆ. ಗಂಡು ಓತಿಯು ತನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಬ...

ಹಂತಕ

ಮಾನವ ತನ್ನ ಬುದ್ಧಿಮತ್ತೆಯಿಂದ ಪ್ರಕೃತಿಯ ಮೇಲೆ ಒಂದು ರೀತಿಯ ಹಿಡಿತ ಸಾಧಿಸಿದ್ದಾನೆ . ಆದರೆ ಪ್ರಕೃತಿಯನ್ನು ಸಂಪೂರ್ಣವಾಗಿ ಗೆಲ್ಲಲಾಗಿಲ್ಲ . ಮಾನವ ಪ್ರಕೃತಿಯನ್ನು ಎಷ್ಟೇ ದಮನ ಮಾಡಲು ಯತ್ನಿಸಿದರು ಅದು ಮತ್ತೆ ಎದ್ದು ನಿಲ್ಲುತ್ತದೆ . ನಾವು ಸಹಜವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಏನನ್ನಾದರು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿರುತ್ತೇವೆ . ಮೇಲ್ನೋಟಕ್ಕೆ ಇದು ಆ ಪರಿಸರದಲ್ಲಿನ ಜೀವಿಗಳಿಗೆ ಮಾರಕವಾಗಿ ಕಂಡುಬಂದರು , ಕಾಲ ಕಳೆದಂತೆ ಆ ಬದಲಾವಣೆಗೆ ಹೊಂದಿಕೊಳ್ಳಲು ಜೀವಿಗಳು ಯತ್ನಿಸುತ್ತವೆ ಮತ್ತು ಬಹುತೇಕ ಯಶಸ್ವಿಯಾಗುತ್ತವೆ .

ನೇಚರ್ ಇಸ್ ಗ್ರೇಟ್

ಹೊಸ ವರುಷ ಬರುತ್ತಿದಂತೆ ಕೆಲವರು ನಾವು ಈ ವರುಷದಿಂದ ಹೀಗೆ ಬದುಕ ಬೇಕು ಎಂದು ಸಂಕಲ್ಪ ಮಾಡುತ್ತಾರೆ . ಮತ್ತು ಕೆಲವು ನಿರ್ಧಾರವನ್ನು ಹೊಸ ವರುಷದಿಂದ ತೆಗೆದುಕೊಳ್ಳುತ್ತಾರೆ ಇಷ್ಟೇ ಅಲ್ಲದೆ ಸರ್ಕಾರ , ಸಂಘ ಸಂಸ್ಧೆಗಳು ಕೆಲವು ಹೊಸ ಯೋಜನೆಯನ್ನು ಹಾಕಿಕೊಳ್ಳುತ್ತವೆ ಸಾಮಾನ್ಯವಾಗಿ ಇವೆಲ್ಲ ಕಾಕತಾಳೀಯ ಇರಬಹುದು ಇತ್ತೀಚಿಗೆ ಉತ್ತರ ಕೊರಿಯ