ಜೀವ ವಿಕಾಸ ಸಿದ್ಧಾಂತದ ಒಂದು ವೈಶಿಷ್ಟ್ಯವೆಂದರೆ ಈಗಾಗಲೇ ಇರುವ ವಿವರಗಳನ್ನು ವಿಶ್ಲೇಷಿಸಿ ಮುಂದಿನದ್ದನ್ನು ಊಹಿಸುವ ಸಾಮರ್ಥ್ಯ! ವಿಜ್ಞಾನವೆಂದರೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ದಾಖಲಿಸುವುದು ಮಾತ್ರವಲ್ಲ, ಇನ್ನೂ ಕಂಡುಹಿಡಿಯದಿರುವ ಸಂಗತಿಗಳ ಬಗ್ಗೆ ಊಹೆಗಳನ್ನು ಮಾಡುವುದು, ನಂತರ ಅವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸುವುದೂ ಅದರ ಮೂಲಭೂತ ಸ್ವಭಾವ. ಆದ್ದರಿಂದ ಪರೀಕ್ಷಿಸಬಹುದಾದ ಊಹೆಗಳನ್ನು ರೂಪಿಸುವುದು ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯ ಹೃದಯವಾಗಿದೆ. ಕೆಲವು ಊಹೆಗಳನ್ನು ಪರಿಶೀಲಿಸುವುದು ಸುಲಭ. ಆದರೆ ಕೆಲವು ಊಹೆಗಳು ಪ್ರಕೃತಿಯಲ್ಲೇ ಅಪರೂಪವಾಗಿ ನಡೆಯುವ ಒಂದು ಘಟನೆಯನ್ನು ನೇರವಾಗಿ ನೋಡುವವರೆಗೆ ಉತ್ತರ ಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹಲವು ದಶಕಗಳಲ್ಲ, ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಡಾರ್ವಿನ್ ಊಹಿಸಿದ್ದ ಪತಂಗದ ಕಥೆಯೂ ಅಂಥದ್ದೇ. ಪರಿಸರ ವಿಜ್ಞಾನ ಮತ್ತು ವಿಕಾಸವಾದದ ಅತ್ಯಂತ ಪ್ರಸಿದ್ಧ ಊಹೆಗಳಲ್ಲಿ ಒಂದಾದ ಈ ಊಹೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಧ್ಯಯನಗಳು ಮತ್ತು ಬಹಳ ದೀರ್ಘಕಾಲದ ಸಂಶೋಧನೆ ಬೇಕಾಯಿತು. ಹೂಬಿಡುವ ಸಸ್ಯಗಳ ಜೀವನದಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ ಹಂತ. ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಅಂಡಾಶಯವನ್ನು ತಲುಪಿದಾಗ ಮಾತ್ರ ಹೊಸ ಬೀಜಗಳು ರೂಪುಗೊಳ್ಳುತ್ತವೆ. ಆದರೆ ಸಸ್ಯಗಳಿಗೆ ತಮ್ಮಷ್ಟಕ್ಕೆ ತಾವೇ ಚಲಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಈ ಕೆ...
ಕಲರವ
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ