ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಚಿರತೆ ಮಾಡಿದ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ!

ಇತ್ತೀಚಿನ ಪೋಸ್ಟ್‌ಗಳು

ಆನೆ, ವಾಚರ್ ಮತ್ತು ಪಟಾಕಿ

ಕಾಡಿನ ಪ್ರಬುದ್ದ ದೈತ್ಯ, ಸಾಂದರ್ಭಿಕ ಚಿತ್ರ ಅದೊಂದು ಸುಂದರವಾದ ದಿನ. ಪಾಲಕ್ಕಾಡಿನ ಕಾಡುಗಳಲ್ಲಿ ಆನೆಗಳನ್ನು ಸೆರೆಹಿಡಿಯಲು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ, ಒಂದು ಸ್ಥಳದಲ್ಲಿದ್ದ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಲಿವೆಯೋ ಇಲ್ಲವೋ ಮತ್ತು ಅದುವರೆಗೆ ಸೆರೆಯಾದ ಚಿತ್ರಗಳನ್ನು ಸಂಗ್ರಹಿಸಲು ಹೋಗುತ್ತಿದ್ದೆವು. ನಾನು ಮತ್ತು ಕೇರಳ ಅರಣ್ಯ ಇಲಾಖೆಯ ಒಬ್ಬ ವೀಕ್ಷಕ (Forest Watcher) ಕಾಡಿನ ದಾರಿಯಲ್ಲಿ ಮಹೀಂದ್ರಾ ಥಾರ್‌ನಲ್ಲಿ ಹೋಗುತ್ತಿದ್ದೆವು. ಅಲ್ಲೊಂದು ಕಡೆ ರಸ್ತೆಯ ಮೇಲೆ ಒಂದು ಮರ ಅಡ್ಡವಾಗಿ ಬಿದ್ದಿರುವುದು ಕಂಡಿತು. ಅದರ ಸುತ್ತಲೂ ಆನೆಗಳ ಕುರುಹುಗಳು! ಅವನ್ನೆಲ್ಲಾ ನೋಡಿದರೆ, ರಾತ್ರಿ ಆನೆಗಳು ಅಲ್ಲಿ ಚೆನ್ನಾಗಿ ಓಡಾಡಿರುವುದು ಸ್ಪಷ್ಟವಾಗಿತ್ತು. ಸುಮಾರು ಅರ್ಧ ಗಂಟೆ ಕಷ್ಟಪಟ್ಟು ಮರವನ್ನು ಸರಿಸಿ ದಾರಿ ತೆರವುಗೊಳಿಸಿದೆವು. ಸ್ವಲ್ಪ ದೂರದ ನಂತರ ರಸ್ತೆ ಜೀಪ್ ನಿಲ್ಲಿಸುವ ಜಾಗ ಬಂದಿತು. ಅಲ್ಲಿಂದ ಕ್ಯಾಮರಾ ಅಳವಡಿಸಿರುವ ಜಾಗ ಸುಮಾರು ಮೂರು ಕಿಲೋಮೀಟರ್‌ಗಳು. ವಾಹನವನ್ನು ಅಲ್ಲೇ ನಿಲ್ಲಿಸಿ ನಡೆದು ಹೊರಟೆವು. ಸ್ವಲ್ಪ ಮುಂದೆ ಹೋದಂತೆ ರಸ್ತೆ ಕಿರಿದಾಗಿ ದಾರಿಯಾಯಿತು. ಪ್ರಾಣಿಗಳ ಕುರುಹುಗಳೂ ಹೆಚ್ಚಾಗತೊಡಗಿದವು. ಆನೆಯ ಲದ್ದಿ, ಕಾಡುನಾಯಿಯ ಮಲ — ಎಲ್ಲವೂ ಹಿಂದಿನ ರಾತ್ರಿ ನಡೆದ ಕತೆ ಹೇಳುತ್ತಿದ್ದವು. ನನ್ನ ಜೊತೆಯಲ್ಲಿದ್ದ ವಾಚರ್‌ಗೆ ಮಾತ್ರ ಸ್ವಲ್ಪ ಆತಂಕ ಶುರುವಾಗಿತ್ತು. ಆನೆಯ ಕುರುಹುಗಳು ಕಾಣುತ್ತಿದ್ದಂತೆಯೇ ...

ಒಂದು ಕೂಗು, ಹಲವು ಕಾಡುಗಳು

ಪೂರ್ವ ಘಟ್ಟದ ಕಾಡುಗಳಲ್ಲಿ ಕಂಡ  Indian Scops-Owl ಕೆಲವು ಪಕ್ಷಿಗಳ ಕೂಗುಗಳು ಆಳವಾಗಿ ನೆನಪಿನಲ್ಲಿ ಉಳಿದುಬಿಡುತ್ತವೆ. 2025ರ ಅಕ್ಟೋಬರ್ ತಿಂಗಳ ಒಂದು ಸಂಜೆ ಪಾಲಕ್ಕಾಡಿನಲ್ಲಿ ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಕುಳಿತಿದ್ದೆ. ಆ ಮನೆಯ ಮುಂದೆ ಕೃಷಿ ನೀರಾವರಿಗೆಂದು ಮಾಡಿದ ದೊಡ್ಡದೊಂದು ಕಾಲುವೆ ಮತ್ತು ಅದರ ಆಚೆಗೆ ಒಂದು ಚಿಕ್ಕ ಕಾಡಿತ್ತು. ಅದರ ಆಚೆಗೆ ಸ್ವಲ್ಪ ಕೃಷಿ ಭೂಮಿ ಮತ್ತು ಅದರ ಹಿಂದೆ ದೊಡ್ಡದಾದ ಕಾಡು ಆರಂಭವಾಗುತ್ತದೆ. ಆ ಹತ್ತಿರದ ಕಾಡಿನಿಂದ Mottled Wood Owlನ ಕೂಗು ಕೇಳಿಬರುತ್ತಿತ್ತು. ಆ ಕೂಗನ್ನು ಕೇಳಿದೊಡನೆ ಬೇರೆ ಬೇರೆ ಗೂಬೆಗಳ ಕೂಗುಗಳು ಒಂದೊಂದಾಗಿ ನೆನಪಿಗೆ ಮೂಡತೊಡಗಿತು. 2023ರಲ್ಲಿ ಆಂಧ್ರಪ್ರದೇಶದ ನಾಗಾರ್ಜುನಸಾಗರ–ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವಾಗ ನಾನು ಮತ್ತು Ng ಕೃಷ್ಣಾ ನದಿಯ ದಡದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದೆವು. ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ನಡೆಯುತ್ತಿತ್ತು. ನಮ್ಮ ಜೊತೆಗೆ ಇನ್ನಿಬ್ಬರು ಫೀಲ್ಡ್ ಅಸಿಸ್ಟೆಂಟ್‌ಗಳಿದ್ದರು. ಒಂದು ಸಂಜೆ ಸಮೀಕ್ಷೆ ಮುಗಿಸಿ ಬಂದ ನಂತರ ಟಾರ್ಚ್ ಬೆಳಕಿನಲ್ಲಿ ಊಟ ಮಾಡುತ್ತಾ ಹೊರಗಡೆ ಕುಳಿತಿದ್ದೆವು. ದಿನವಿಡೀ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ವಿಚಿತ್ರ ಶಬ್ದ ಕೇಳಿಸಿತು. ಮೊದಲಿಗೆ ಅದು ಏನೆಂದು ಅರ್ಥವಾಗಲಿಲ್ಲ. ಯಾರೋ ನಗುತ್ತಿರುವಂತೆ ಅನಿಸುತ್ತಿತ್ತು. ಆದರೆ ಅದು ಮನುಷ್ಯನ ...

ಹುಲಿಯ ಬದುಕಿನಿಂದ ಚುರುಳಿ ಕೊಂಬನ್‌ವರೆಗೆ

ಕಾಡಿನ ನಿಗೂಢಗಳನ್ನು ತರೆದಿಡುವ ' ಹುಲಿಯ ಬದುಕು ' ಕಾಡಿನ ಕೆಲವು ಕಥೆಗಳು ಕಾಡಿನಲ್ಲೇ ಆರಂಭವಾಗುವುದಿಲ್ಲ. ಅವು ದಶಕಗಳ ಹಿಂದೆ, ಪುಸ್ತಕಗಳ ಪುಟಗಳಲ್ಲಿ, ಒಂದು ಯುವ ಮನಸ್ಸಿನ ಕಲ್ಪನೆಗಳಲ್ಲಿ, ಬದುಕಿನ ದಿಕ್ಕನ್ನೇ ಬದಲಿಸುವ ಮೌನ ಕನಸುಗಳಲ್ಲಿ ಆರಂಭವಾಗುತ್ತವೆ. ನನಗೆ ಆ ಕಥೆ 'ಹುಲಿಯ ಬದುಕು' ಮತ್ತು 'ಹುಲಿರಾಯನ ಆಕಾಶವಾಣಿ' ಪುಸ್ತಕಗಳಿಂದ ಆರಂಭವಾಯಿತು. 1980ರ ದಶಕದ ಕೊನೆಯ ಭಾಗ ಮತ್ತು 1990ರ ದಶಕದಲ್ಲಿ ಡಾ. ಉಲ್ಲಾಸ್ ಕಾರಂತ್ ಅವರು ಕರ್ನಾಟಕದ ಕಾಡುಗಳಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿಗಳನ್ನು ಹಿಂಬಾಲಿಸಿ ನಡೆಸಿದ ಅಧ್ಯಯನಗಳನ್ನು ಆಧರಿಸಿದ ಈ ಪುಸ್ತಕಗಳು 2000ರ ದಶಕದ ಮಧ್ಯಭಾಗದಲ್ಲಿ ಪ್ರಕಟವಾಗಿತ್ತು. ಕೈಯಲ್ಲಿ ಆಂಟೆನಾ ಹಿಡಿದು ನಾಗರಹೊಳೆ ಕಾಡಿನಲ್ಲಿ ನಡೆಯುತ್ತಾ, ಹುಲಿಯ ಕುತ್ತಿಗೆಯಲ್ಲಿದ್ದ ಕಾಲರ್‌ನಿಂದ ಬರುವ ರೇಡಿಯೊ ಸಂಕೇತವನ್ನು ಆಲಿಸುತ್ತಿದ್ದ ಅವರ ವರ್ಣನೆಗಳು ನನಗೆ ಹೊಸ ಜಗತ್ತೊಂದನ್ನು ತೆರೆದವು. ಒಂದು ಅರ್ಥದಲ್ಲಿ, ಆ ಪುಸ್ತಕಗಳೇ ನನ್ನನ್ನು ವನ್ಯಜೀವಿ ಕ್ಷೇತ್ರದತ್ತ ಸೆಳೆಯಿತು. 2011ರಲ್ಲಿ ನಾನು ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ (CWS) ಸಂಸ್ಥೆಗೆ ಸೇರಿದಾಗ, ಡಾ. ಕಾರಂತ್ ಅವರು ಆರಂಭಿಸಿದ್ದ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಗಳು ಇನ್ನೂ ಮುಂದುವರಿಯುತ್ತಲೇ ಇದ್ದವು. ಭಾರತದ ಹುಲಿಗಳ ಸಂಖ್ಯೆಯನ್ನು ಅವರೇ ಪರಿಚಯಿಸಿದ್ದ ವಿಧಾನಗಳ ಮೂಲಕ ಅಂದಾಜಿಸಲಾಗುತ್ತಿತ್ತು. ಹುಲಿಗಳ ಬದುಕ...

ನೇರಳೆ ಮರದ ಕತೆ

  ಬೆಂಗಳೂರಿನ ಆಕಾಶದ ತುಂಬಾ ಮುಂಗಾರು ಪೂರ್ವ ಮೋಡಗಳು ಆವರಿಸಿತ್ತು. ತಾಪಮಾನವೂ ಇಳಿದು ಸ್ವಲ್ಪ ನಿರಾಳವೆನಿಸಿತ್ತು. ಈ ಮಳೆ ಮೋಡದ ದಿನಗಳು ಚೇತೋಹಾರಿ! ನಮ್ಮ ಮನೆಯ ಮುಂದೆ ಇರುವ ನೇರಳೆ ಮರ ( Syzygium cumini) ಈಗ ಹೊಸದಾಗಿ ಚಿಗುರಿದ ಎಲೆಗಳಿಂದ ಉಜ್ವಲವಾಗಿ ಹೊಳೆಯುತ್ತಿತ್ತು . ಈ ನಿತ್ಯಹರಿದ್ವರ್ಣ ಪ್ರಭೇದ ಸದಾ ಕಾಲ ಎಲೆಗಳಿಂದ ತುಂಬಿದ್ದರೂ ಮಳೆಯಿಂದ ತೊಳೆದ ಎಲೆಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ನೇರಳೆ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ? ಆದರೆ ನಮ್ಮ ಮನೆಯ ಮುಂದಿನ ಈ ಮರ ಇನ್ನೂ ಹಣ್ಣು ಬಿಡಲು ಪ್ರಾರಂಭಿಸಿಲ್ಲ !   ಈ ಚಿಕ್ಕ ಮರಕ್ಕೂ ತನ್ನದೇ ಆದ ಒಂದು ಕಥೆಯಿದೆ. ಇದು ಸಣ್ಣ ಗಿಡವಾಗಿದ್ದಾಗ ಜಿ.ಕೆ.ವಿ.ಕೆ ಸಮೀಪದ ನಮ್ಮ Office ನ ಮುಂದೆ ನೆಡಲು ಇದನ್ನು ತಂದಿದ್ದೆವು. ಆದರೆ ಆ ಕಟ್ಟಡದ ಯಜಮಾನ ಅದನ್ನು ಅಲ್ಲಿ ನೆಡಲು ಒಪ್ಪಲಿಲ್ಲ! ಕಾರಣ ಸರಳ - ಮುಂದೊಂದು  ದಿನ ಅದು ಹಣ್ಣು ಬಿಟ್ಟು , ಮಕ್ಕಳು ನೇರಳೆ ಹಣ್ಣಿಗಾಗಿ ಕಲ್ಲು ಎಸೆದರೆ? ನಮ್ಮ Office ನ ಕಟ್ಟಡದಲ್ಲಿ ಬಹುತೇಕ ಗಾಜು ಇರುವುದರಿಂದ ನೇರಳೆ ಗಿಡವನ್ನು ಅಲ್ಲಿ ನೆಡುವುದು ಒಳ್ಳೆಯದಲ್ಲ ಎಂದು ಭಾವಿಸಿದ . ಎಂಥಾ ದೂ(ದು)ರಾಲೋಚನೆ! ಹೀಗೆ ಪಕ್ಕಕ್ಕಿಟ್ಟ ಗಿಡವನ್ನು ಒಂದು ದಿನ ಸದ್ದಿಲ್ಲದೆ ಮನೆಗೆ ತಂದೆ. Office ನಲ್ಲಿ ಅದು ಯಾರ ಗಮನಕ್ಕೂ ಬರಲಿಲ್ಲ.   ಮನೆಗೆ ತಂದಾಗ ಎಲ್ಲರೂ ಅದನ್ನು ಮಾವಿನ ಗಿಡವೆಂದೇ ಭಾವಿಸಿದರು. ನಮ್ಮ ಮನೆಯ...

ಕೋಲು ಜೇನು (ರೆಡ್ ಡ್ವಾರ್ಫ್ ಹನಿ ಬೀ)

ನಮಗೆ ಜೇನ್ದುಂಬಿಗಳು ಎಂದರೆ ಸ್ವಲ್ಪ ಹೆದರಿಕೆ ಇದ್ದೆ ಇರುತ್ತದೆ. ಒಮ್ಮೆಲೆ ಇವು ದಾಳಿ ನಡೆಸಿದರೆ ಒಮ್ಮೊಮ್ಮೆ ಜೀವಕ್ಕೆ ಅಪಾಯ ವಾಗಬಹುದು. ಆದರೆ ಎಲ್ಲ ಜೇನ್ದುಂಬಿಗಳು ಅಷ್ಟು ಅಪಾಯಕಾರಿ ಆಗಿರುವುದಿಲ್ಲ. ಅಂತಹ ಒಂದು ಜೇನ್ದುಂಬಿಯೆ ಕೋಲು ಜೇನು.

ಮುತ್ತುಗ

ಮುತ್ತುಗ ನಮ್ಮ ದೇಶದ ಪವಿತ್ರವಾದ ಮರಗಳಲ್ಲಿ ಒಂದು. ನಮ್ಮ ಬಯಲುಸೀಮೆ ಅಥವಾ ಕಾವಲು ಪ್ರದೇಶಗಳಲ್ಲಿ ಕಂಡುಬರುವ ಒಂದು ಸುಂದರವಾದ ಮರಳಲ್ಲಿ ಒಂದು.

ನ್ಯೂ ಹೊರೈಜನ್: ಸಕ್ರಿಯ ಲೋಕದ ರಹಸ್ಯಗಳು

ಪ್ಲೂಟೊವನ್ನು ದಾಟಿ ಮುಂದೆ ಹೊರಟ ನ್ಯೂ ಹೊರೈಜನ್ ತಾನು ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಭೂಮಿಗೆ ರವಾನಿಸಲು ಸುಮಾರು 15 ತಿಂಗಳ ಕಾಲ ಹಿಡಿಯಿತು. ಸುಮಾರು 4.5 ಬೆಳಕಿನ ಗಂಟೆಗಳಷ್ಟು ದೂರವಿದ್ದ ನ್ಯೂ ಹೊರೈಜನ್ ಮಾಹಿತಿಯನ್ನು ಒಂದು ಅಥವಾ ಎರಡು ಕಿಲೋಬಿಟ್ಸ್ ಪರ್ ಸೆಕೆಂಡ್ ವೇಗದಲ್ಲಿ ರವಾನಿಸಲು ಅಷ್ಟು ಸಮಯ ಬೇಕಾಯಿತು. ಪ್ಲೂಟೊದಿಂದ ಬಂದ ಮಾಹಿತಿ ಪ್ಲೂಟೊ ಮತ್ತು ಅದರ ಉಪಗ್ರಹಗಳು ಈ ಮೊದಲು ಅಂದುಕೊಂಡಕ್ಕಿಂತ ಸಾಕಷ್ಟು ಸಂಕೀರ್ಣವಾಗಿರುವುದಾಗಿ ತಿಳಿದುಬಂತು. ಈ ಮೊದಲು ವಿಜ್ಞಾನಿಗಳು ತಿಳಿದಿದ್ದಂತೆ ಅದರ ವಾತಾವರಣದ ಪಲಾಯನ ಅಂದುಕೊಂಡದ್ದಕ್ಕಿಂತ ಕಡಿಮೆ ದರದಲ್ಲಿ ಇರುವುದರಿಂದ, ಪ್ಲೂಟೊ ಬಗೆಗಿನ ಊಹೆಯನ್ನು ಪುನರ್ವಿಮರ್ಶೆ ಮಾಡುವಂತಾಯಿತು.

ಶ್ರೀಗಂಧ ವಿಪರ್ಣಕ

ಮಳೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ಮನೆಯ ಗೋಡೆಯ ಮೇಲೆ ಅಥವಾ ಕೈತೋಟದಲ್ಲಿ ಅನೇಕ ಪತಂಗಗಳು ಮತ್ತು ಅದರ ಕಂಬಳಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಇವಕ್ಕೆ ಸಾಕಷ್ಟು ಆಹಾರ ಒದಗಿಸುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗೆ ಮಳೆಗಾಲದಲ್ಲಿ ಒಮ್ಮೆ ಗೋಡೆಯ ಮೇಲೆ ಕುಳಿತಿದ್ದ ಒಂದು ಪತಂಗ ಸ್ಯಾಂಡಲ್‌ವುಡ್ ಡೀಫೋಲಿಯೇಟರ್ ಅಂದರೆ ಶ್ರೀಗಂಧ ವಿಪರ್ಣಕ ಎಂದು ತಿಳಿಯಿತು.

ಸೆನ್ಸರ್‌ಗಳ ಲೋಕ

 ನೀವು ಈ ಲೇಖನವನ್ನು  ನಿಮ್ಮ ಮೊಬೈಲ್ ಸ್ಮಾರ್ಟ್ ಫೋನಿನನಲ್ಲಿ ಓದುತ್ತಿದ್ದರೆ, ನಿಮ್ಮ ಸ್ಕ್ರೀನ್‌ನಲ್ಲಿ ಟಚ್ ಸೆನ್ಸರ್ ಇದೆ. ಅದೇ ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಉಪಯೋಗಿಸುತ್ತಿದ್ದರೆ, ಟಚ್‌ಪ್ಯಾಡ್ ನಲ್ಲಿ ಟಚ್ ಸೆನ್ಸರ್ ಅಥವಾ ಮೌಸ್‌ನಲ್ಲಿ ಮೂವ್‌ಮೆಂಟ್ ಸೆನ್ಸರ್ ಇರುತ್ತದೆ. ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲೆಡೆ ಸೆನ್ಸರ್‌ಗಳು ಕಾಣಿಸುತ್ತವೆ. ಬಹುಶಃ ಸೆನ್ಸರ್ ಇಲ್ಲದ ನಮ್ಮ ಜೀವನ ನೆನೆಸಿಕೊಳ್ಳುವುದು ಕಷ್ಟವಾಗುತ್ತದೆ.