ಕತ್ತಲು ಮಳೆಯಲ್ಲಿ ಕಂಡ ಚಂದಿರ - ಚಂದ್ರ ಪತಂಗ ಅದು ವಾಲ್ಪರೈನಲ್ಲಿ ಉಭಯವಾಸಿ ಸಮೀಕ್ಷೆಯ ಒಂದು ರಾತ್ರಿ. ಸಮೀಕ್ಷೆಗಾಗಿ ನಾವು ತಾಲನಾರ್ ಎಂಬ ಜಾಗಕ್ಕೆ ತೆರಳಿದ್ದೆವು. ನಮ್ಮೊಂದಿಗೆ Nature Conservation Foundationನ ಹಿರಿಯ ವಿಜ್ಞಾನಿ ಡಾ. ದಿವ್ಯಾ ಮುದ್ದಪ್ಪ ಅವರೂ ಇದ್ದರು. ಆರ್ಕಿಡ್ಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ದಾರಿಯುದ್ದಕ್ಕೂ ಕಾಣುವ ಪ್ರತಿಯೊಂದು ಆರ್ಕಿಡ್ನ ಕಥೆಯನ್ನು ಹೇಳುತ್ತಾ ಸಾಗುತ್ತಿದ್ದರು. ಆದರೆ ತಾಲನಾರ್ನ ಕಾಫಿ ತೋಟದ ರಸ್ತೆಗಳು ನನ್ನ ಸಂಪೂರ್ಣ ಗಮನವನ್ನು ವಾಹನ ಚಾಲನೆಯ ಮೇಲೆಯೇ ಕೇಂದ್ರೀಕರಿಸುವಂತೆ ಮಾಡಿದ್ದವು. ಹೀಗಾಗಿ ಆರ್ಕಿಡ್ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಕೈಚೆಲ್ಲಬೇಕಾಯಿತು. ಅನಮಲೈ ಬೆಟ್ಟಗಳ ಈ ಭಾಗದಲ್ಲಷ್ಟೇ ಕಂಡುಬರುವ ಒಂದು ಕಪ್ಪೆಯನ್ನು ಹುಡುಕುತ್ತಿದ್ದೆವು. ಸಾಕಷ್ಟು ಹುಡುಕಿದರೂ ಆ ಕಪ್ಪೆ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. (ಆ ಕಪ್ಪೆಯ ಹೆಸರು ನೆನಪಾಗುತ್ತಿಲ್ಲ) ಆ ಕಪ್ಪೆಯನ್ನು ಹುಡುಕುವುದನ್ನು ಬಿಟ್ಟು ಎಂದಿನಂತೆ ನಾವು ಸಮೀಕ್ಷೆ ಶುರುಮಾಡಿದೆವು. ಸಮೀಕ್ಷೆಯುದ್ದಕ್ಕೂ ಮಳೆ ಸುರಿಯುತ್ತಲೇ ಇತ್ತು. ಸಮೀಕ್ಷೆ ಮುಗಿಸಿ ಹಿಂತಿರುಗುವ ಪ್ರಯಾಣ ಇನ್ನಷ್ಟು ಕಠಿಣವಾಗಿತ್ತು. ಕೆಸರುಮಯವಾದ ದಾರಿ ಸವಾಲಾಗಿತ್ತು. ಎರಡು ಬಾರಿ ವಾಹನ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಅನಮಲೈ ಬೆಟ್ಟಗಳ ದಟ್ಟ ಕತ್ತಲಲ್ಲಿ ಹೇಗೋ ಅದನ್ನು ಹೊರತೆಗೆದು ಮತ್ತೆ ಮ...
ಕಲರವ
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ