ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ

ಇತ್ತೀಚಿನ ಪೋಸ್ಟ್‌ಗಳು

ಪರದೆ ಸರಿಸಿದ ಕಾಡು

ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು!  ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿರುವ ಒಂದು ಹಳೆಯ ಕೂಪ್ ರಸ್ತೆಯ ಮೂಲಕ ನಡೆದು, ಎರಡು ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸುವುದು ನಮ್ಮ ಕೆಲಸವಾಗಿತ್ತು. ದಾರಿಯುದ್ದಕ್ಕೂ ಕಾಡು ತನ್ನ ಅನೇಕ ಕಥೆಗಳನ್ನು ನಮ್ಮ ಮುಂದೆ ತೆರೆದಿಟ್ಟಿತು. ಕಾಡಿನ ನೆಲ ಹಲವಾರು ವನ್ಯಜೀವಿಗಳ ಹೆಜ್ಜೆಗುರುತುಗಳಿಂದ ತುಂಬಿತ್ತು. ಕಡವೆ, ಕಾಡೆಮ್ಮೆ ಮತ್ತು ಕಾಡುಹಂದಿಗಳ ಹೆಜ್ಜೆ ಗುರುತು ಆಗಾಗ ಕಾಣಿಸುತ್ತಿದ್ದವು. ಆದರೆ ಎಲ್ಲಕ್ಕಿಂತ ಗಮನ ಸೆಳೆದದ್ದು ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು! ಆನೆಯ ಹೆಜ್ಜೆ ಗುರುತು ಸುಮಾರು ಒಂದು ದಿನ ಹಳೆಯದಾಗಿ ಕಾಣಿಸುತ್ತಿತ್ತು. ಅದರ ನಂತರ ಅದೇ ಹಾದಿಯಲ್ಲಿ ಹುಲಿ ನಡೆದುಹೋಗಿತ್ತು. ಕಾಡಿನ ಈ ಎರಡು ಪ್ರಮುಖ ಜೀವಿಗಳ ಹಾದಿಗಳು ಒಂದಕ್ಕೊಂದು ಬೆರೆತಿರುವುದು ಅರಣ್ಯದ ಸೂಕ್ಷ್ಮ ಸಮತೋಲನವನ್ನು ನೆನಪಿಸಿತು. ಕಾಡು ಪುನರುಜ್ಜೀವನಗೊಳ್ಳಲು ಅಗತ್ಯವಾದ ಬೀಜಗಳನ್ನು ಆನೆಗಳು ಹರಡುತ್ತವೆ; ಬಲಿಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಹುಲಿಗಳು ಪರಿಸರದ ಸಮತೋಲನವನ್ನು ಕಾಪಾಡುತ್ತವೆ. ಮಧ್ಯಾಹ್ನ ಸುಮಾರು ಮೂರುವರೆ ಗಂಟೆಯ ವೇಳೆಗೆ ಕೊನೆಯ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಹಿಂದಿರುಗಲು ಸಿದ್ಧವಾಗುತ್ತಿದ್ದಾಗ, ಏಕಾಏಕಿ ಆನೆಯ ಗಂಭೀರ ಕರೆಯೊಂದು ಕಾಡಿನ ನಿಶ್ಶಬ್ದತೆಯನ್ನು ಭೇದಿಸಿತು. ಅದು ಬಹಳ ಹತ್ತಿರದಲ್ಲೇ ಇತ್ತು. ಆ ಧ್...

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ

  ಮೋಡಗಳಲ್ಲಿ ಮರೆಯಾದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಒಂದು ಬೆಟ್ಟ ನಾನು ಪಾಲಕ್ಕಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ, ಪಾಲಕ್ಕಾಡು ಫಾರೆಸ್ಟ್ ಡಿವಿಷನ್ ಅಲ್ಲದೆ ಪಕ್ಕದ ಮನ್ನಾರುಕಾಡು ಫಾರೆಸ್ಟ್ ಡಿವಿಷನ್‌ನಲ್ಲಿಯೂ ಕೆಲಸಮಾಡಲು ನಮಗೆ ಅನುಮತಿ ಇತ್ತು. ಮನ್ನಾರುಕಾಡಿನಿಂದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹತ್ತಿರವಾಗಿತ್ತು. ಹೀಗೊಮ್ಮೆ ಸೈಲೆಂಟ್ ವ್ಯಾಲಿಯ ಹತ್ತಿರ ಹೋಗುತ್ತಿದ್ದಾ ನನಗೆ 2017ರಲ್ಲಿ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿ ಕೆಲಸಮಾಡುತ್ತಿದ್ದ ದಿನಗಳು ನೆನಪಾಯಿತು. ಆ ವರ್ಷ ನಾನು ವಾನರಗಳ ಸಮೀಕ್ಷೆಯ ಭಾಗವಾಗಿ ಹಲವು ದಿನಗಳನ್ನು ಸೈಲೆಂಟ್ ವ್ಯಾಲಿಯೊಳಗೆ ಕಳೆದಿದ್ದೆ. ಸೈಲೆಂಟ್ ವ್ಯಾಲಿಯಲ್ಲಿ ನಾಲ್ಕು ಜಾತಿಯ ವಾನರಗಳು ಪ್ರಬೇಧಗಳು ಕಂಡುಬರುತ್ತವೆ. ಸಿಂಗಳೀಕ, ಮುಸಿಯ, ನೀಲಗಿರಿ ಮುಸಿಯ ಮತ್ತು ಎಲ್ಲೆಡೆ ಕಾಣುವ ಕೋತಿ. ಇನ್ನೊಂದು ಪ್ರಭೇದವೂ ಇರಬಹುದು. ಅದುವೇ ಕಾಡುಪಾಪ. ಆದರೆ ಅದು ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಪ್ರಾಣಿ. ನಮ್ಮ ಹಗಲಿನ ಸಮೀಕ್ಷೆಯ ವ್ಯಾಪ್ತಿಗೆ ಅದು ಬರುತ್ತಿರಲಿಲ್ಲ. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಮಳೆಕಾಡು ಆ ದಿನಗಳಲ್ಲಿ ನಮ್ಮ ಸಮೀಕ್ಷೆಗಳಿಗೆ ನಿಗದಿತ ದಾರಿಗಳಿರಲಿಲ್ಲ. ಮಳೆಕಾಡಿನೊಳಗೆ ನೇರವಾಗಿ ನಡೆದು ವಾನರಗಳ ಕೂಗು ಕೇಳಿಸುತ್ತದೆಯೇ? ಮರಗಳ ನಡುವೆ ನಾಲ್ಕು ವಾನರಗಳಲ್ಲಿ ಯಾವುದಾದರೂ ಕಾಣಿಸುತ್ತದೆಯೇ? ಎಂದು ಗಮನಿಸುವುದಾಗಿತ್ತು. ಸೈಲೆಂಟ್ ವ್ಯಾಲಿಯ ಶಾಶ್ವತ ಸಂಗಾ...

ಪಶ್ಚಿಮ ಘಟ್ಟಗಳ ಮಾಯಾಜಾಲ

ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಶೋಲಾ ಹುಲ್ಲುಗಾವಲು  ಕೆಲವೊಂದು ಪರಿಸರ ವ್ಯವಸ್ಥೆಗಳು ಗಮನವಿಟ್ಟು ನೋಡದೇ ಹೋದರೆ ನಮಗೆ ಅರಿವಾಗುವುದೇ ಇಲ್ಲ. ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿ ನಡೆಯುತ್ತಿದ್ದಾಗ ಈ ಪರಿಸರ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಳ್ಳುವ ಮಾಯಾಜಾಲ ಎಂದು ಅರಿವಾಯಿತು. ಹಾಗೆ ನಾನು ಗಮನಿಸಿದ ಎರಡು ಜಾಲಗಳಲ್ಲಿ ಒಂದು ಜಾಲ ಬಯಲಿನಲ್ಲಿದ್ದರೆ ಮತ್ತೊಂದು ಇನ್ನೊಂದು ದಟ್ಟ ಕಾಡಿನೊಳಗಿತ್ತು. ಮೊದಲನೆಯ ಜಾಲ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ! ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಎತ್ತರದ ಬೆಟ್ಟಗಳ ಮೇಲೆ ಹರಡಿಕೊಂಡಿರುವ ಹುಲ್ಲುಗಾವಲುಗಳು ಮತ್ತು ಅವುಗಳ ನಡುವೆ ಚದುರಿಕೊಂಡಿರುವ ಶೋಲಾ ಕಾಡುಗಳು! ದೂರದಿಂದ ನೋಡಿದರೆ ಅವು ಬೆಟ್ಟಗಳ ಮೇಲಿನ ಹಸಿರು ಹೊದಿಕೆಯಂತೆ ಕಾಣುತ್ತವೆ. ಆದರೆ ಅವು ಕೇವಲ ಸುಂದರ ಭೂದೃಶ್ಯವಷ್ಟೇ ಅಲ್ಲ. ದಕ್ಷಿಣ ಭಾರತದ ಅನೇಕ ನದಿಗಳು ಹುಟ್ಟುವ ಸ್ಥಳ ಇದೇ. ಮಳೆ ಸುರಿದಾಗ ಈ ಹುಲ್ಲುಗಾವಲುಗಳು ನೀರನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮಣ್ಣಿನ ಮೂಲಕ ಹರಿಯಬಿಡುತ್ತವೆ. ಹೀಗೆ ವರ್ಷವಿಡೀ ಹೊಳೆಗಳು ಮತ್ತು ನದಿಗಳಿಗೆ ನೀರು ಒದಗಿಸುತ್ತವೆ. ಬೆಟ್ಟದ ಮೇಲಿನ ಈ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳು ಇಲ್ಲದಿದ್ದರೆ, ಕೆಳಗಿರುವ ಲಕ್ಷಾಂತರ ಜನರ ಬದುಕು ಬೇರೆ ರೀತಿಯದ್ದಾಗಿರುತ್ತಿತ್ತು. ಈ ಪರಿಸರ ವ್ಯವಸ್ಥೆಯಲ್ಲಿ ಅನೇಕ ವಿಶಿಷ್ಟ ಜೀವಿಗಳು ವಾಸಿಸುತ್ತವೆ. ಪ್ರಾಣಿ, ಪಕ್ಷಿ, ...

ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ಬಾಗಿಲು!

ಪಾಲಕ್ಕಾಡಿನಿಂದ ಕಾಣುವ ಪಶ್ಚಿಮಘಟ್ಟ ಪರ್ವತ ಶ್ರೇಣಿ ಪಾಲಕ್ಕಾಡಿನ ಕೆಲಸದ ದಿನಗಳಲ್ಲಿ ಒಂದು ಸಂಜೆ ಕೆಲಸ ಮುಗಿದ ನಂತರ ನಾವು ಪಾಲಕ್ಕಾಡಿನ ಹೊರವಲಯದಲ್ಲಿರುವ ಒಂದು ಸಣ್ಣ ಕಲ್ಲುಗುಡ್ಡವನ್ನು ಹತ್ತಲು ಹೊರಟೆವು. ಅದು ತುಂಬಾ ಎತ್ತರವಾಗಿ ಇರಲಿಲ್ಲ. ಆದರೆ ಸಂಪೂರ್ಣ ಕಲ್ಲಿನಿಂದ ಕೂಡಿದ್ದ ಆ ಗುಡ್ಡವನ್ನು ಹತ್ತುವಾಗ ಒಂದು ವಿಚಿತ್ರ ಭಾವನೆ ಮೂಡುತ್ತಿತ್ತು. ಪಶ್ಚಿಮ ಘಟ್ಟದ ವಿಕಾಸ, ಭೂಗೋಳ, ಬೆಂಗಳೂರಿನ ಹವಾಮಾನ ಇತ್ಯಾದಿ ವಿಷಯಗಳು ಕಣ್ಣಮುಂದೆ ಬಂತು. ಗುಡ್ಡದ ಸುತ್ತಲೂ ಕೃಷಿಭೂಮಿಗಳು ಮತ್ತು ಜನವಸತಿ ಪ್ರದೇಶಗಳಿದ್ದವು. ಆದರೆ ಮೇಲಕ್ಕೆ ಏರುತ್ತಿದ್ದಂತೆ ಆ ಗದ್ದಲಗಳಿಂದ ಕಳಚಿಕೊಂಡು ನಿಧಾನವಾಗಿ ದೂರಾದೆವು. ಸಾಕಷ್ಟು ವೇಗದಲ್ಲಿ ಬೀಸುತ್ತಿದ್ದ ಗಾಳಿಯ ಸದ್ದು ಮಾತ್ರ ಕೇಳತೊಡಗಿತು. ಸುಮಾರು ಐದೂವರೆ ಗಂಟೆಗೆ ನಾವು ಗುಡ್ಡದ ತುದಿ ತಲುಪಿದೆವು. ಅಲ್ಲಿ ಕಂಡ ದೃಶ್ಯ ಮಾತ್ರ ಅದ್ಭುತವಾಗಿತ್ತು. ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ದೊಡ್ಡದೊಂದು ಬಾಗಿಲು ನನ್ನ ಮುಂದೆ ವಿಶಾಲವಾಗಿ ಹರಡಿಕೊಂಡಿತ್ತು. ಪಶ್ಚಿಮ ಘಟ್ಟಗಳ ಬಗ್ಗೆ ಓದಿರುವವರಿಗೆ ಪಾಲಕ್ಕಾಡು ಗ್ಯಾಪ್ ಹೊಸ ವಿಷಯವಲ್ಲ. ಆದರೆ ಅದನ್ನು ಒಂದು ಆ ಗ್ಯಾಪ್ ನ ಒಂದು ಜಾಗದಿಂದಲೇ ನೋಡುವ ಅನುಭವವೇ ಬೇರೆ. ನಕ್ಷೆಯಲ್ಲಿ ನೋಡಿದರೆ, ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಗೋಡೆಯಲ್ಲಿ ದೊಡ್ಡ ಖಾಲಿ ಜಾಗವೊಂದು ಕಾಣುತ್ತದೆ! ಇಡೀ ಪಶ್ಚಿಮ ಘಟ್ಟಗಳಲ್ಲಿ ಇಷ್ಟು ದೊಡ್ಡ ಗ್ಯಾಪ್ ಮತ್ತೊಂದಿಲ್ಲ. ಯಾವುದೇ ಬೆಟ್ಟ-ಗುಡ್ಡಗಳ...

ಫಾರೆಸ್ಟ್ ಗಾಂಪ್ಸ್

ದೂರದ ಬೆಟ್ಟದ ಮೇಲೆ ನಿಂತಿದ್ದ ಆನೆಗಳು ಚುಕ್ಕಿಗಳಾಗಿ ಕಾಣುತ್ತಿದ್ದವು! (ಬೇರೊಂದು ಸ್ಥಳದಲ್ಲಿ ಸೆರೆಹಿಡಿದ ಈ ಚಿತ್ರದಲ್ಲಿ ದೂರದ ಗುಡ್ಡದ ಮೇಲೆ ನಿಂತಿರುವ ಆನೆಯನ್ನು ಗುರುತಿಸಬಲ್ಲಿರಾ?) - ಸಾಂಧರ್ಭಿಕ ಚಿತ್ರ  ಪಾಲಕ್ಕಾಡಿನಲ್ಲಿ ಕೆಲಸ ಮಾಡುವಾಗ ಒಂದು ದಿನ ನನ್ನ ಸಹೋದ್ಯೋಗಿ ರಜೆ ಮೇಲೆ ಇದ್ದ ಕಾರಣ ನಾನು ಫೀಲ್ಡ್ ಸ್ಟೇಷನ್‌ನಲ್ಲೇ ಉಳಿಯಲು ನಿರ್ಧರಿಸಿದ್ದೆ. ಅದು ವಿಶ್ರಾಂತಿಯ ದಿನವಾಗಬೇಕಿತ್ತು. ನನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿದ ಮೇಲೆಯೂ ಕನಿಷ್ಠ ಅರ್ಧ ದಿನವಾದರೂ ಬೇರಾವುದೇ ಕೆಲಸದ ಒತ್ತಡವಿಲ್ಲದೆ ಕಳೆಯಬಹುದು ಎಂದುಕೊಂಡಿದ್ದೆ. ಆದರೆ ಮಧ್ಯಾಹ್ನ ಊಟ ಮುಗಿದ ಸ್ವಲ್ಪ ಹೊತ್ತಿನಲ್ಲೇ ನನ್ನ ಸಹೋದ್ಯೋಗಿಯ ಕರೆ ಬಂತು. ಹತ್ತಿರದ ಜಾಗದಲ್ಲಿರುವ ಕ್ಯಾಮೆರಾ ಟ್ರ್ಯಾಪ್ ಗಳನ್ನು ಪರಿಶೀಲಿಸಿ ಬರಬಹುದು ಎಂದ. ನಿಜ ಹೇಳಬೇಕೆಂದರೆ ಆ ಕರೆ ನನಗೆ ಸ್ವಲ್ಪ ಕಿರಿಕಿರಿ ಉಂಟುಮಾಡಿತು. ಫೀಲ್ಡ್ ಕೆಲಸಕ್ಕೂ ಒಂದು ಲಯ ಇರಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯಾವಾಗ ಬೇಕಾದರೂ, ಯಾರಿಗೆ ಯಾವಾಗ ಅನುಕೂಲವೋ ಆಗ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ಹೀಗಲ್ಲದಿದ್ದರೆ ಬೇರೆ ಕೆಲಸಗಳಿಗೆ ಸಮಯವೇ ಸಿಗುವುದಿಲ್ಲ. ಆದರೆ ಆ ದಿನ Rapid Response ತಂಡದ ಒಬ್ಬ ಉಪ ವಲಯ ಅರಣ್ಯಾಧಿಕಾರಿಯೂ ಬರುತ್ತಾರೆ ಎಂದಾಗ ನನಗೆ ಬೇರೆ ದಾರಿಯಿರಲಿಲ್ಲ. ಹೋಗಲು ಒಪ್ಪಿಕೊಂಡೆ. ಆ ಅಧಿಕಾರಿಯನ್ನು ನಾನು ಆಗಲೇ ಹಲವಾರು ಬಾರಿ ಭೇಟಿ ಮಾಡಿದ್ದೆ. ಅವರು...

ಚಿರತೆ ಮಾಡಿದ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ!

ಕಾಡಿನಲ್ಲಿ ಬಲಿ ಪ್ರಾಣಿಗಳ ಸಮೀಕ್ಷೆಗೆ ಹೊರಟ ಚಿರತೆ! (ಸಾಂದರ್ಭಿಕ ಚಿತ್ರ)  2025ರ ಅಕ್ಟೋಬರ್ ತಿಂಗಳ ಒಂದು ಮುಂಜಾವು. ನಾನು ಪಾಲಕ್ಕಾಡಿನ ಫೀಲ್ಡ್ ಸ್ಟೇಷನ್‌ನಲ್ಲಿ ಆಗತಾನೆ ಕಣ್ಣು ಬಿಡುತ್ತಿದ್ದೆ. ಸಮಯ ಸುಮಾರು ಐದೂವರೆ ಗಂಟೆ. ಫೀಲ್ಡ್ ಸ್ಟೇಷನ್ ಹತ್ತಿರವೇ ಒಂದು ಚಿರತೆಯ ಗುರುಗುಟ್ಟುವ ಸದ್ದು ಕೇಳಿಸಿತು. ನಾನು ಹಾಗೇಯೇ ಹಿಂದಿನ ಘಟನೆಗಳನ್ನು ನೆನೆಯತೊಡಗಿದೆ. ಚಿರತೆಯ ಕೂಗು ಕೇಳಿದಾಗಲೆಲ್ಲಾ ನನಗೆ 2023ರ ಒಂದು ಘಟನೆ ನೆನಪಾಗುತ್ತದೆ. ಆ ಸಮಯದಲ್ಲಿ ನಾವು ತೆಲಂಗಾಣದ ಅಮರಾಬಾದ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಮಾಡುತ್ತಿದ್ದೆವು. ನಮ್ಮ ಇಡೀ ತಂಡ ಕಾಡಿನ ಒಳಭಾಗದಲ್ಲಿ ತಂಗಿತ್ತು. ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್ ಯಾವುದೂ ಇರದ ಆ ಜಾಗ ಮುಖ್ಯ ರಸ್ತೆಯಿಂದ ಸುಮಾರು ಹತ್ತು ಕಿಲೋಮೀಟರ್ ಒಳಗಿತ್ತು. ಅಲ್ಲಿದ್ದ ಅರಣ್ಯ ಇಲಾಖೆಯ ಕ್ಯಾಂಪ್ ಎಲ್ಲರಿಗೂ ಸಾಕಾಗದ ಕಾರಣ ನಮ್ಮಲ್ಲಿ ಕೆಲವರು ಟೆಂಟ್‌ಗಳಲ್ಲಿ ಮಲಗುತ್ತಿದ್ದೆವು. ಅಲ್ಲಿನ ಸ್ನಾನದ ವ್ಯವಸ್ಥೆಯೂ ಮಜವಾಗಿತ್ತು! ಹತ್ತಿರದಲ್ಲೇ ಒಂದು ಸಣ್ಣ ಕೊಳ. ಆ ಕೊಳದ ಪಕ್ಕ ಇದ್ದ ಬೋರ್‌ವೆಲ್‌ಗೆ ಅರಣ್ಯ ಇಲಾಖೆ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಪಂಪ್‌ಸೆಟ್ ಒಂದನ್ನು ಅಳವಡಿಸಿದ್ದರು. ಅಧಿಕೃತವಾಗಿ ಅದು ಕಾಡುಪ್ರಾಣಿಗಳಿಗಾಗಿ. ಆದರೆ ನಾವು ಕೂಡ ಅದನ್ನೇ ಬಳಸುತ್ತಿದ್ದೆವು. ಬೋರ್‌ವೆಲ್‌ನಿಂದ ಬರುವ ನೀರನ್ನು ಹಿಡಿದು ಸ್ನಾನ ಮಾಡುತ್ತಿದ್ದಾಗ, ನಾವು ಅಲ್ಲಿ...

ಆನೆ, ವಾಚರ್ ಮತ್ತು ಪಟಾಕಿ

ಕಾಡಿನ ಪ್ರಬುದ್ದ ದೈತ್ಯ, ಸಾಂದರ್ಭಿಕ ಚಿತ್ರ ಅದೊಂದು ಸುಂದರವಾದ ದಿನ. ಪಾಲಕ್ಕಾಡಿನ ಕಾಡುಗಳಲ್ಲಿ ಆನೆಗಳನ್ನು ಸೆರೆಹಿಡಿಯಲು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ, ಒಂದು ಸ್ಥಳದಲ್ಲಿದ್ದ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಲಿವೆಯೋ ಇಲ್ಲವೋ ಮತ್ತು ಅದುವರೆಗೆ ಸೆರೆಯಾದ ಚಿತ್ರಗಳನ್ನು ಸಂಗ್ರಹಿಸಲು ಹೋಗುತ್ತಿದ್ದೆವು. ನಾನು ಮತ್ತು ಕೇರಳ ಅರಣ್ಯ ಇಲಾಖೆಯ ಒಬ್ಬ ವೀಕ್ಷಕ (Forest Watcher) ಕಾಡಿನ ದಾರಿಯಲ್ಲಿ ಮಹೀಂದ್ರಾ ಥಾರ್‌ನಲ್ಲಿ ಹೋಗುತ್ತಿದ್ದೆವು. ಅಲ್ಲೊಂದು ಕಡೆ ರಸ್ತೆಯ ಮೇಲೆ ಒಂದು ಮರ ಅಡ್ಡವಾಗಿ ಬಿದ್ದಿರುವುದು ಕಂಡಿತು. ಅದರ ಸುತ್ತಲೂ ಆನೆಗಳ ಕುರುಹುಗಳು! ಅವನ್ನೆಲ್ಲಾ ನೋಡಿದರೆ, ರಾತ್ರಿ ಆನೆಗಳು ಅಲ್ಲಿ ಚೆನ್ನಾಗಿ ಓಡಾಡಿರುವುದು ಸ್ಪಷ್ಟವಾಗಿತ್ತು. ಸುಮಾರು ಅರ್ಧ ಗಂಟೆ ಕಷ್ಟಪಟ್ಟು ಮರವನ್ನು ಸರಿಸಿ ದಾರಿ ತೆರವುಗೊಳಿಸಿದೆವು. ಸ್ವಲ್ಪ ದೂರದ ನಂತರ ರಸ್ತೆ ಜೀಪ್ ನಿಲ್ಲಿಸುವ ಜಾಗ ಬಂದಿತು. ಅಲ್ಲಿಂದ ಕ್ಯಾಮರಾ ಅಳವಡಿಸಿರುವ ಜಾಗ ಸುಮಾರು ಮೂರು ಕಿಲೋಮೀಟರ್‌ಗಳು. ವಾಹನವನ್ನು ಅಲ್ಲೇ ನಿಲ್ಲಿಸಿ ನಡೆದು ಹೊರಟೆವು. ಸ್ವಲ್ಪ ಮುಂದೆ ಹೋದಂತೆ ರಸ್ತೆ ಕಿರಿದಾಗಿ ದಾರಿಯಾಯಿತು. ಪ್ರಾಣಿಗಳ ಕುರುಹುಗಳೂ ಹೆಚ್ಚಾಗತೊಡಗಿದವು. ಆನೆಯ ಲದ್ದಿ, ಕಾಡುನಾಯಿಯ ಮಲ — ಎಲ್ಲವೂ ಹಿಂದಿನ ರಾತ್ರಿ ನಡೆದ ಕತೆ ಹೇಳುತ್ತಿದ್ದವು. ನನ್ನ ಜೊತೆಯಲ್ಲಿದ್ದ ವಾಚರ್‌ಗೆ ಮಾತ್ರ ಸ್ವಲ್ಪ ಆತಂಕ ಶುರುವಾಗಿತ್ತು. ಆನೆಯ ಕುರುಹುಗಳು ಕಾಣುತ್ತಿದ್ದಂತೆಯೇ ...

ಒಂದು ಕೂಗು, ಹಲವು ಕಾಡುಗಳು

ಪೂರ್ವ ಘಟ್ಟದ ಕಾಡುಗಳಲ್ಲಿ ಕಂಡ  Indian Scops-Owl ಕೆಲವು ಪಕ್ಷಿಗಳ ಕೂಗುಗಳು ಆಳವಾಗಿ ನೆನಪಿನಲ್ಲಿ ಉಳಿದುಬಿಡುತ್ತವೆ. 2025ರ ಅಕ್ಟೋಬರ್ ತಿಂಗಳ ಒಂದು ಸಂಜೆ ಪಾಲಕ್ಕಾಡಿನಲ್ಲಿ ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಕುಳಿತಿದ್ದೆ. ಆ ಮನೆಯ ಮುಂದೆ ಕೃಷಿ ನೀರಾವರಿಗೆಂದು ಮಾಡಿದ ದೊಡ್ಡದೊಂದು ಕಾಲುವೆ ಮತ್ತು ಅದರ ಆಚೆಗೆ ಒಂದು ಚಿಕ್ಕ ಕಾಡಿತ್ತು. ಅದರ ಆಚೆಗೆ ಸ್ವಲ್ಪ ಕೃಷಿ ಭೂಮಿ ಮತ್ತು ಅದರ ಹಿಂದೆ ದೊಡ್ಡದಾದ ಕಾಡು ಆರಂಭವಾಗುತ್ತದೆ. ಆ ಹತ್ತಿರದ ಕಾಡಿನಿಂದ Mottled Wood Owlನ ಕೂಗು ಕೇಳಿಬರುತ್ತಿತ್ತು. ಆ ಕೂಗನ್ನು ಕೇಳಿದೊಡನೆ ಬೇರೆ ಬೇರೆ ಗೂಬೆಗಳ ಕೂಗುಗಳು ಒಂದೊಂದಾಗಿ ನೆನಪಿಗೆ ಮೂಡತೊಡಗಿತು. 2023ರಲ್ಲಿ ಆಂಧ್ರಪ್ರದೇಶದ ನಾಗಾರ್ಜುನಸಾಗರ–ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವಾಗ ನಾನು ಮತ್ತು Ng ಕೃಷ್ಣಾ ನದಿಯ ದಡದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದೆವು. ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ನಡೆಯುತ್ತಿತ್ತು. ನಮ್ಮ ಜೊತೆಗೆ ಇನ್ನಿಬ್ಬರು ಫೀಲ್ಡ್ ಅಸಿಸ್ಟೆಂಟ್‌ಗಳಿದ್ದರು. ಒಂದು ಸಂಜೆ ಸಮೀಕ್ಷೆ ಮುಗಿಸಿ ಬಂದ ನಂತರ ಟಾರ್ಚ್ ಬೆಳಕಿನಲ್ಲಿ ಊಟ ಮಾಡುತ್ತಾ ಹೊರಗಡೆ ಕುಳಿತಿದ್ದೆವು. ದಿನವಿಡೀ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ವಿಚಿತ್ರ ಶಬ್ದ ಕೇಳಿಸಿತು. ಮೊದಲಿಗೆ ಅದು ಏನೆಂದು ಅರ್ಥವಾಗಲಿಲ್ಲ. ಯಾರೋ ನಗುತ್ತಿರುವಂತೆ ಅನಿಸುತ್ತಿತ್ತು. ಆದರೆ ಅದು ಮನುಷ್ಯನ ...

ಹುಲಿಯ ಬದುಕಿನಿಂದ ಚುರುಳಿ ಕೊಂಬನ್‌ವರೆಗೆ

ಕಾಡಿನ ನಿಗೂಢಗಳನ್ನು ತರೆದಿಡುವ ' ಹುಲಿಯ ಬದುಕು ' ಕಾಡಿನ ಕೆಲವು ಕಥೆಗಳು ಕಾಡಿನಲ್ಲೇ ಆರಂಭವಾಗುವುದಿಲ್ಲ. ಅವು ದಶಕಗಳ ಹಿಂದೆ, ಪುಸ್ತಕಗಳ ಪುಟಗಳಲ್ಲಿ, ಒಂದು ಯುವ ಮನಸ್ಸಿನ ಕಲ್ಪನೆಗಳಲ್ಲಿ, ಬದುಕಿನ ದಿಕ್ಕನ್ನೇ ಬದಲಿಸುವ ಮೌನ ಕನಸುಗಳಲ್ಲಿ ಆರಂಭವಾಗುತ್ತವೆ. ನನಗೆ ಆ ಕಥೆ 'ಹುಲಿಯ ಬದುಕು' ಮತ್ತು 'ಹುಲಿರಾಯನ ಆಕಾಶವಾಣಿ' ಪುಸ್ತಕಗಳಿಂದ ಆರಂಭವಾಯಿತು. 1980ರ ದಶಕದ ಕೊನೆಯ ಭಾಗ ಮತ್ತು 1990ರ ದಶಕದಲ್ಲಿ ಡಾ. ಉಲ್ಲಾಸ್ ಕಾರಂತ್ ಅವರು ಕರ್ನಾಟಕದ ಕಾಡುಗಳಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿಗಳನ್ನು ಹಿಂಬಾಲಿಸಿ ನಡೆಸಿದ ಅಧ್ಯಯನಗಳನ್ನು ಆಧರಿಸಿದ ಈ ಪುಸ್ತಕಗಳು 2000ರ ದಶಕದ ಮಧ್ಯಭಾಗದಲ್ಲಿ ಪ್ರಕಟವಾಗಿತ್ತು. ಕೈಯಲ್ಲಿ ಆಂಟೆನಾ ಹಿಡಿದು ನಾಗರಹೊಳೆ ಕಾಡಿನಲ್ಲಿ ನಡೆಯುತ್ತಾ, ಹುಲಿಯ ಕುತ್ತಿಗೆಯಲ್ಲಿದ್ದ ಕಾಲರ್‌ನಿಂದ ಬರುವ ರೇಡಿಯೊ ಸಂಕೇತವನ್ನು ಆಲಿಸುತ್ತಿದ್ದ ಅವರ ವರ್ಣನೆಗಳು ನನಗೆ ಹೊಸ ಜಗತ್ತೊಂದನ್ನು ತೆರೆದವು. ಒಂದು ಅರ್ಥದಲ್ಲಿ, ಆ ಪುಸ್ತಕಗಳೇ ನನ್ನನ್ನು ವನ್ಯಜೀವಿ ಕ್ಷೇತ್ರದತ್ತ ಸೆಳೆಯಿತು. 2011ರಲ್ಲಿ ನಾನು ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ (CWS) ಸಂಸ್ಥೆಗೆ ಸೇರಿದಾಗ, ಡಾ. ಕಾರಂತ್ ಅವರು ಆರಂಭಿಸಿದ್ದ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಗಳು ಇನ್ನೂ ಮುಂದುವರಿಯುತ್ತಲೇ ಇದ್ದವು. ಭಾರತದ ಹುಲಿಗಳ ಸಂಖ್ಯೆಯನ್ನು ಅವರೇ ಪರಿಚಯಿಸಿದ್ದ ವಿಧಾನಗಳ ಮೂಲಕ ಅಂದಾಜಿಸಲಾಗುತ್ತಿತ್ತು. ಹುಲಿಗಳ ಬದುಕ...