ಪೂರ್ವಘಟ್ಟ ಭಾಗದ ಕಾಡುಗಳಲ್ಲಿ ನಾನು 2017ರಿಂದ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಕಾಡಿನ ನಡುವೆ ಇದ್ದ ಚೆಂಚು ಬುಡಕಟ್ಟುಗಳು ವಾಸಿಸುತ್ತಿದ್ದ ಹಳ್ಳಿ ಒಂದರಲ್ಲಿ ಕರಡಿಯೊಂದು ಒಬ್ಬ ವ್ಯಕ್ತಿಯನ್ನು ಕೊಂದಿತ್ತು. ಈ ಮುಂಚೆಯೂ ನಡೆದಿದ್ದ ಇಂತಹಾ ಅನೇಕ ಪ್ರಕರಣಗಳ ಬಗ್ಗೆ ಅಲ್ಲಿನ ಜನ ಮಾತನಾಡುತ್ತಿದ್ದರು. ಈ ಮುಂಚೆ ನಾವು ಅನೇಕ ವರ್ಷಗಳನ್ನು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಕಂಡ ಕರಡಿಗಳ ವರ್ತನೆಗೆ ವ್ಯತಿರಿಕ್ತವಾಗಿ ಇಲ್ಲಿನ ಕರಡಿಗಳು ಅತ್ಯಂತ ಆಕ್ರಮಣಕಾರಿ ಎನ್ನುವುದು ಅಲ್ಲಿನ ಜನಗಳ ಮಾತುಗಳಿಂದ ತಿಳಿಯುತ್ತಿತ್ತು. ನಾವು ಸಮೀಕ್ಷೆಯ ಸಲುವಾಗಿ ಕಾಡಿನಲ್ಲಿ ನಡೆಯುವುದಕ್ಕೂ, ಜನ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಡಿನಲ್ಲಿ ತಿರುಗಾಡುವುದಕ್ಕೂ ವ್ಯತ್ಯಾಸವಿದೆ. ಪ್ರಾಣಿಗಳ ಆವಾಸದಲ್ಲಿ ಅವು ನಮ್ಮನ್ನು ಗುರುತಿಸುವ ಮೊದಲೇ, ನಾವು ಪ್ರಾಣಿಗಳನ್ನು ಗುರುತಿಸಲು, ನಾವು ಪ್ರತಿಯೊಂದಯ ಹೆಜ್ಜೆಯನ್ನು ಎಚ್ಚರಿಕೆಯಿಂದ, ಆದಷ್ಟು ಸದ್ದು ಕಡಿಮೆಯಾಗುವಂತೆ ಇಡುತ್ತಿದ್ದೆವು. ಆದರೂ ಪ್ರತಿಬಾರಿಯೂ ಪ್ರಾಣಿಗಳು ನಮ್ಮನ್ನು ಗುರುತಿಸುವ ಮೊದಲೇ ನಾವು ಅವುಗಳನ್ನು ಗುರುತಿಸುತ್ತಿದ್ದೇವೆಂದು ಹೇಳಲಾರೆ. ಕಣ್ಣಾಮುಚ್ಚಾಲೆ ಆಟಕ್ಕೆ ರೆಡಿನಾ? (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ ಅಮರಾಬಾದ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 2019ರ ದಿನಗಳು. ಹುಲಿ ಸಂಖ್ಯೆ ಅಂದಾಜಿಸುವ ಸಲುವಾಗಿ ಮತ್ತು ಅವುಗಳ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ