ವಿಷಯಕ್ಕೆ ಹೋಗಿ

ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣ


ಪಕ್ಷಿಗಳೆಲ್ಲಾ ನಾವು ನೋಡ್ದಾಗ ಆಹಾರ ಹುಡುಕ್ಕೊಂಡೋ ಇಲ್ಲಾ ಗೂಡೂ ಮಾಡೋದ್ರಲ್ಲೋ busy ಆಗಿರ್ತಾವೆ. ಅದ್ರಲ್ಲಿ ಎಷ್ಟು involve ಆಗಿರುತ್ವೆ ಅಂದ್ರೆ ಒಂದೊಂದ್ಸಾರಿ ಯಾರು ಬಂದ್ರೂ ಗಮನಿಸೋದಿಲ್ಲ.
Castle rockನ ಹತ್ರ ಇವೋಲಿ ಅಂತ ಒಂದೂರು. ಅಲ್ಲಿ ಒಂದು ಪುಟ್ಟ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆನ ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ, ನದಿಗಳ ಹತ್ರ ಯಾವುದಾದ್ರೂ ಪ್ರಾಣಿನೋ, ಪಕ್ಷಿನೋ ಕಾಣಬಹುದು ಅಂತ, ಹೊಳೆ ನದಿಗಳ ಹತ್ರ ತುಂಬಾ ನಿಧಾನವಾಗಿ ಜೀಪ್ ಓಡಿಸ್ತೀನಿ. ಆವಾಗೆಲ್ಲಾ ಒಂದಲ್ಲ ಒಂದು ಪ್ರಾಣಿನೋ ಪಕ್ಷಿನೋ ಕಂಡೇ ಕಾಣುತ್ತೆ. ನಾನು ಹೊಳೆ ಹತ್ರ ಆಗ್ತಿದ್ದಂತೆ ಜೀಪ್ ನಿಧಾನ ಮಾಡ್ದೆ. ಹೊಳೆಯ ಮಧ್ಯದಲ್ಲಿ ಒಂದು ಕಲ್ಲಿನ ಮೇಲೆ ಒಂದು Common Kingfisher ಕುಳಿತಿತ್ತು. ಅದನ್ನ ನೋಡಿ ಜೀಪ್ ನಿಲ್ಲಿಸಿದೆ. ಅದು ನೀರನ್ನೇ ನೋಡುತ್ತಾ ಹೊಂಚು ಹಾಕಿ ಕುಳಿತಿತ್ತು. ಕೆಲವು ಕ್ಷಣಗಳಾದ ಮೇಲೆ ನಿಧಾನವಾಗಿ ಜೀಪನ್ನು ನೀರಿನ ಹತ್ರ ತಗೊಂಡು ಹೋದೆ. ಆಗಲೂ ಪಕ್ಷಿ ಹಾರಲಿಲ್ಲ, ನನ್ನ ಜೀಪಿನ ಕಡೆ ಗಮನ ಕೊಡಲೂ ಇಲ್ಲ. ಆರೆ! ಇನ್ನೂ ಸ್ವಲ್ಪ ಹತ್ರ ತಗೊಂಡು ಹೋಗಿ ನೋಡೋಣ ಅಂತ ನಾನು ಜೀಪನ್ನ ನೀರಿಗೆ ಇಳಿಸಿದೆ. Kingfisherಗೆ ಎನನ್ನಿಸಿತೋ ಏನೋ, ಹಾರಿ ಬಂದು ಜೀಪಿನ ಬಾನೆಟ್ ಮೇಲೆ ಕುಳಿತುಕೊಂಡು ನೀರನ್ನೇ ನೋಡ ತೊಡಗಿತು! ನನ್ನಿಂಡ ಮೂರಡಿ ದೂರದಲ್ಲೇ ಆ ಪಕ್ಷಿ ಕುಳಿತಿದೆ. ನಾನು ಪಕ್ಷಿನ ನೋಡ್ತಾ, ಪಕ್ಷಿ ನೀರನ್ನೇ ನೋಡ್ತಾ ಸುಮಾರು ಒಂದು ನಿಮಿಷ ಆಯ್ತು. ಆ ಪಕ್ಷಿನ ಅವತ್ತು ತುಂಬಾ ಸೂಕ್ಷ್ಮವಾಗಿ ಗಮನಿಸಿದೆ. ಕೊನೆಗೆ ಅದರ ಒಂದು photoನಾದ್ರೂ ತೆಗೆಯೋಣ ಅಂತ ಮೆಲ್ಲಗೆ ನನ್ನ ಕಾಲಿನ ಹತ್ರ ಇದ್ದ cameraಗೆ ಕೈ ಹಾಕ್ದೆ. ನನ್ನ ಸ್ವಲ್ಪವೇ ಚಲನೆಗೆ ಪಕ್ಷಿ alert ಆಯ್ತು. ಒಂದು ಸಾರಿ ನನ್ನ ಕಡೆ ನೋಡಿತು. ಆವಾಗ ಅದಕ್ಕೆ ಗೊತ್ತಾಗಿರ್ಬಹುದು ತಾನೆಲ್ಲಿದ್ದೇನೆ ಅಂತ. ಮರುಕ್ಷಣ kingfisher ಹಾರಿಹೋಯ್ತು. ಆವತ್ತು ನನ್ನ ಕೈಗೆ camera ಸಿಕ್ಕಿದ್ರೂ ಕೂಡ ಒಳ್ಳೆ photo ತೆಗಿತಿದ್ದೇ ಅಂತ ಹೇಳಲಾರೆ. ಎಷ್ಟೋ ಸಾರಿ camera ಇದ್ದೂ ನಾವು ಕೆಲವೊಂದು ಕ್ಷಣಗಳನ್ನು ಸೆರೆ ಹಿಡಿಯೋದಿಕ್ಕಾಗೋದಿಲ್ಲ. ಅವುಗಳನ್ನ ಸುಮ್ನೆ ಅನುಭವಿಸಬೇಕಷ್ಟೇ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...