ವಿಷಯಕ್ಕೆ ಹೋಗಿ

ಜೋಳಿಗೆ ಹುಳು

ನಾವು ನಮ್ಮ ಮನೆಯ ಗೋಡೆ ಅಥವಾ ಕಾಂಪೌಡಿನ ಮೇಲೆ ಒಂದುರೀತಿ ಚಿಕ್ಕದಾಗಿ ಕಸ ಒಗ್ಗೂಡಿರುವುದನ್ನು ನೋಡಿರುತ್ತೇವೆ. ಇದನ್ನು ಬಹುತೇಕ ಜನ ಕಸವೆಂದು ಉಪೇಕ್ಷಿಸುವುದೆ ಹೆಚ್ಚು. ಆದರೆ ಸ್ವಲ್ಪ ತಾಳ್ಮೆಯಿಂದ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಜೀವಿಯೆಂದು ತಿಳಿಯುತ್ತದೆ.

ಕಸದಂತೆ ಕಾಣುವ ಜೋಳಿಗೆ ಹುಳು
ಸಾಮಾನ್ಯವಾಗಿ ಈ ಜೀವಿ ಸ್ತಬ್ಧವಾಗಿರುತ್ತದೆ ಹಾಗಾಗಿ ಇದು ಜನರ ಗಮನವನ್ನು ಸೆಳೆಯುವುದಿಲ್ಲ. ಈ ಜೀವಿಯನ್ನು .ಇಂಗ್ಲಿಷಿನಲ್ಲಿ ಬ್ಯಾಗ್ ವರ್ಮ್ ಎನ್ನುತ್ತಾರೆ. ನಾವು ಕನ್ನಡದಲ್ಲಿ ಜೋಳಿಗೆ ಹುಳು ಎಂದು ಕರೆಯಬಹುದು. ಈ ಹೆಸರು ಬರಲು ಕಾರಣ ಅದು ತನ್ನ ಗೂಡನ್ನು ರಚಿಸಿಕೊಂಡು ಅದನ್ನು ಹೊತ್ತು ಎಲ್ಲೆಡೆ ಚಲಿಸುತ್ತಿರುತ್ತದೆ, ಗೂಡು ಜೋಳಿಗೆ ರೀತಿ ಕಾಣುತ್ತದೆ 

ಜೋಳಿಗೆ ಹುಳುವಿನ ರೀತಿ ಕಾಣುವ ಕೇಸ್ ವರ್ಮ್
ಜೋಳಿಗೆ ಹುಳು ನಿಜಕ್ಕೂ ಹುಳವಲ್ಲ. ಇದೊಂದು ಪತಂಗ. ಇದು ತನ್ನ ಲಾರ್ವ ಅವಸ್ಥೆಯಲ್ಲಿ ಹೀಗೆ ಕಾಣಿಸುತ್ತದೆ. ಚಿಟ್ಟೆ ಹಾಗು ಪತಂಗಗಳ ಜಾತಿಯಲ್ಲಿ ಸೈಕಿಡೆ ಎಂಬ ಕುಟುಂಬ ವರ್ಗಕ್ಕೆ ಸೇರುತ್ತದೆ. ಇದನ್ನು ಕೇಸ್ ವರ್ಮ್ ಎಂದು 

ಕೆಲವರು ಕರೆಯುತ್ತಾರೆ. ಆದರೆ ಅವು ಇದೆ ರೀತಿ ಕಾಣುವ ಇನ್ನೊಂದು ಕುಟುಂಬಕ್ಕೆ ಸೇರಿದ ಪತಂಗ. ಜೋಳಿಗೆ ಹುಳುವಿನಲ್ಲಿ ಅನೇಕ ಜಾತಿಗಳು ಇವೆ. ಇವು ಪ್ರಪಂಚಾದ್ಯಂತ ವ್ಯಾಪಿಸಿವೆ. 

ಇವುಗಳ ಜೀವನ ಚಕ್ರ ಸ್ವಲ್ಪ ವಿಚಿತ್ರವಾಗಿದೆ. ಇವು ಮೊಟ್ಟೆ ಯಿಂದ ಹೊರ ಬಂದ ತಕ್ಷಣ ತಮ್ಮ ಸುತ್ತಲೂ ರೇಷ್ಮೆ ಯಂಥ ಎಳೆಯನ್ನು ಸುತ್ತಿಕೊಂಡು ಗೂಡನ್ನು ರಚಿಸಿಕೊಳ್ಳುತ್ತದೆ. ಅನಂತರ ತನ್ನ ಪರಿಸರದಲ್ಲಿ ಲಭ್ಯ ವಿರುವ ಕಡ್ಡಿ, ಗಿಡ ದ ಇತರ ಭಾಗಗಳು, ಮರಳಿನ ಕಣಗಳು, ಮಣ್ಣು ಇವನ್ನೆಲ್ಲ ರೇಷ್ಮೆಯ ಎಳೆಗೆ ಅಂಟಿಸಿಕೊಳ್ಳುತ್ತದೆ. ತನ್ನ ತಲೆ ಮತ್ತು ಮುಂಭಾಗವನ್ನು ಹೊರಚಾಚಿಸಿಕೊಂಡು ಗೂಡನ್ನು ಹೊತ್ತು ಚಲಿಸುತ್ತದೆ. ಬಹುತೇಕ ಜೋಳಿಗೆ ಹುಳು ಎಲೆಗಳನ್ನು ಭಕ್ಷಿಸುತ್ತವೆ. ಕೆಲವು ಕಲ್ಲು ಹೂವನ್ನು ತಿನ್ನುತ್ತವೆ. ತಮ್ಮ ಪ್ಯೂಪ ಅವಸ್ಥೆಯಲ್ಲಿ ಗೋಡೆಗಳ ಮೇಲೆ ಅಥವಾ ಬಂಡೆಗಳ ಮೇಲೆ ಅಂಟಿಕೊಂಡು ಬಿಡುತ್ತವೆ. 

ಕಡ್ಡಿಗಳಿಂದ ಆವೃತವಾಗಿರುವ ಜೋಳಿಗೆ ಹುಳು




ಜೋಳಿಗೆ ಹುಳುವಿನ ಗೂಡು ೧ ಸೇಮೀ ನಿಂದ ೧೫ ರವರೆಗೂ ವಿವಿಧ ಆಕಾರದಲ್ಲಿ ಕಾಣಸಿಗುತ್ತವೆ. ಪ್ರತಿಯೊಂದು ಜಾತಿಯು ತಮ್ಮದೆ ವಿನ್ಯಾಸದ ಗೂಡುಗಳನ್ನು ರಚಿಸಿಕೊಳ್ಳುತ್ತವೆ. ಹೀಗಾಗಿ ಗೂಡಿನ ವಿನ್ಯಾಸದ ಮೇಲೆ ಅದು ಯಾವ ಜಾತಿಯ ಜೋಳಿಗೆ ಹುಳು ಎಂದು ಗುರುತಿಸಬಹುದು. ಇವು ತಮ್ಮ ಪರಿಸರದಲ್ಲಿ ಸಿಗುವ ವಸ್ತುಗಳಿಂದ ಗೂಡನ್ನು ನಿರ್ಮಿಸುವದರಿಂದ, ಪಕ್ಷಿ ಮುಂತಾದ ಬೇಟೆಗಾರರಿಂದ ಮರೆಯಾಗುವಲ್ಲಿ ಯಶಸ್ವಿ ಯಾಗುತ್ತದೆ. 

ವಯಸ್ಕ ಕೀಟವಾದ ನಂತರ ಗಂಡು ಜೋಳಿಗೆ ಹುಳು ರೆಕ್ಕೆಯನ್ನು ಮೂಡಿಸಿಕೊಂಡು ಗೂಡನ್ನು ತ್ಯಜಿಸುತ್ತದೆ. ಹೆಣ್ಣು ಗೂಡನ್ನು ತ್ಯಜಿಸುವುದಿಲ್ಲ. ಒಂದು ವೇಳೆ ತ್ಯಜಿಸಿದರು ಇವುಗಳ ರೆಕ್ಕೆ ಬಲಿಷ್ಠವಾಗಿರುವುದಿಲ್ಲ ಹಾಗಾಗಿ ಹಾರಲಾಗುವುದಿಲ್ಲ. ಹೆಣ್ಣು ತನ್ನ ಗೂಡಿನಲ್ಲಿಯೆ ಮೊಟ್ಟೆಗಳನ್ನಿಟ್ಟು ಸಾವನ್ನಪ್ಪುತ್ತದೆ. 

ಗೋಪುರಾಕಾರದ ಜೋಳಿಗೆ ಹುಳು 
ಸಾಮಾನ್ಯವಾಗಿ ಜೋಳಿಗೆ ಹುಳುವಿನಿಂದ ನಮಗೆ ಯಾವುದೇ ತೊಂದರೆ ಇಲ್ಲ. ಕೆಲವು ಜಾತಿ ಬೆಳೆಗಳಿಗೆ ಮಾರಕವಾಗಬಹುದು. ಉಳಿದಂತೆ ಇವು ನಿರುಪದ್ರವಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...