ವಿಷಯಕ್ಕೆ ಹೋಗಿ

ರಣಹದ್ದುಗಳು

ಒಂದು ಬೆಳಗ್ಗೆ ನಾಗರಹೊಳೆಯ ಹಸಿರು ಗದ್ದೆ ರಸ್ತೆಯಲ್ಲಿ ಕಾಟಿಯೊಂದು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿತ್ತು. ಆ ಜಾಗದಲ್ಲಿ ಹೆಣ್ಣು ಹುಲಿಯೊಂದು ತನ್ನೆರಡು ಮರಿಗಳೊಂದಿಗೆ ಓಡಾಡುತ್ತಿದ್ದ ವಿಷಯ ತಿಳಿದಿತ್ತು. ಹಾಗಾಗಿ ಈ ಕೆಲಸ ಆ ಹುಲಿಯದ್ದೇ ಇರಬಹುದು ಎನ್ನಿಸಿತು. ಆದರೆ ಮೊದಲು ಕಂಡಿದ್ದು ಸತ್ತು ಬಿದ್ದಿದ್ದ ಕಾಟಿಯಲ್ಲ, ಅದರ ಸುತ್ತ ನೆರೆದಿದ್ದ ಸುಮಾರು ಮುವತ್ತು ಬಿಳಿ ಎದೆಯ ರಣಹದ್ದುಗಳು (White-rumped Vulture). ಹುಲಿ ತಿನ್ನದೆ ಬಿಟ್ಟಿದ್ದ ಸುಮಾರು ಅರ್ಧದಷ್ಟು ಕಾಟಿಯ ಭಾಗ ರಣಹದ್ದುಗಳಿಗೆ ಭರ್ಜರಿ ಭೋಜನ ಒದಗಿಸಿತ್ತು.

  ಬಂಡೀಪುರದಲ್ಲಿ ಸುತ್ತಾಡುವಾಗ ಕಾಡುನಾಯಿಗಳ ಗುಂಪೊಂದು ತಿಂದು ಅಳಿದುಳಿದ ಜಿಂಕೆಯ ಕಳೇಬರದ ಹತ್ತಿರ ಅಪರೂಪದ ಎರಡು ಕೆಮ್ಮಂಡೆ ರಣಹದ್ದು ಗಳು (Red-headed Vulture) ಕುಳಿತಿದ್ದವು. ಹೆಚ್ಚು ಸಂಖ್ಯೆಯಲ್ಲಿದ್ದ ಬೂದಿ ಮಂಡೆಯ ರಣಹದ್ದುಗಳು (Indian Vulture) ಜಗಳವಾಡುತ್ತಿದ್ದರೆ ಎರಡು ಕೆಮ್ಮಂಡೆ ರಣಹದ್ದುಗಳು ಸಂಯಮಿಗಳಂತೆ ಕಾದು ಕುಳಿತಿದ್ದವು.

 
ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಎಲ್ಲೋ ಸತ್ತು ಕೊಳೆತ ಜೀವಿಗಳನ್ನು ಹುಡುಕಿ ತಿಂದು, ಅವುಗಳು ಪೂರ್ತಿಯಾಗಿ ಪರಿಸರದಲ್ಲಿ ಲೀನವಾಗುವಂತೆ ಮಾಡುತ್ತಿದ್ದ ರಣಹದ್ದುಗಳು ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಮೊದಲೆಲ್ಲಾ ಹಳ್ಳಿಗಳ ಸಮೀಪವೇ ಬದುಕುತ್ತಿದ್ದ ರಣಹದ್ದುಗಳು ಈಗ ಕೆಲವು ಕಾಡುಗಳಿಗಷ್ಟೇ ಸೀಮೀತವಾಗಿದೆ.

ಕಾಮೆಂಟ್‌ಗಳು

  1. ಲೇಖನ ಚೆನ್ನಾಗಿ ಮೂಡಿ ಬಂದಿದೆ. ರಣಹದ್ದುಗಳ ಬಗ್ಗೆ ಓದಿ ಸಂತಸವಾಯಿತು. ರಣಹದ್ದುಗಳ ಸಂಖ್ಯೆ ಕಳೆದೆರಡು ದಶಕದಲ್ಲಿ ಸುಮಾರು 97%ರಷ್ಟು ಕಮ್ಮಿಯಾಗಿದೆ. ಇದಕ್ಕೆ ಕಾರಣ ಡಿಕ್ಲೋಫೆನಾಕ್ ಎಂಬ ದನಗಳ ಔಷಧಿ. ಈ ಔಷಧಿ ರಣಹದ್ದುಗಳ ಮೂತ್ರಪಿಂಡ ವೈಫಲ್ಯಗೊಳಿಸಿ ಅವುಗಳ ಸಾವಿಗೆ ಕಾರಣವಾಗುತ್ತದೆ. ಆದರೆ ಇದು ನಾಡಿನಲ್ಲಿ ಮಾತ್ರ ಆಗಬೇಕಿತ್ತು ಕಾಡಿನಲ್ಲಿ ಅವುಗಳ ಸಂಖ್ಯೆ ಕಮ್ಮಿಯಾಗಲು ಕಾರಣವೇನಿರಬಹುದು? ಎಂಬ ಪ್ರಶ್ನೆ ಕಾಡುತ್ತದೆ.

    ಪ್ರತ್ಯುತ್ತರಅಳಿಸಿ
  2. ರಣಹದ್ದುಗಳು ಊರಿನ ಹತ್ತಿರವೇ ಹೆಚ್ಚಾಗಿ ಬದುಕುತ್ತಿದ್ದಿರಬಹುದು. ಕಾಡಿನಲ್ಲಿರುವ ರಣಹದ್ದುಗಳು ಊರಿಗೆ ಬರಬಹುದಾದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅದೂ ಅಲ್ಲದೆ ನೂರಾರು ಕಿಲೋಮೀಟರ್ ಕಾಡುಗಳೇನು ನಮ್ಮಲ್ಲಿ ಉಳಿದಿಲ್ಲ.
    ಈ ಬಗ್ಗೆ ನನ್ನ ಕೆಲವು ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿದೆ. ಎಲ್ಲರೂ ಹೇಳುವುದೇನೆಂದರೆ ಈಗಲೂ ಕಾಡುಗಳಲ್ಲಿ ಮೇವಿಗಾಗಿ ದನಗಳನ್ನು ಬಿಡಲಾಗುತ್ತದೆ, ಅದೇ ಮುಖ್ಯಕಾರಣ, ಅದರಿಂದಲೇ ಕಾಡುಗಳಲ್ಲೂ ಅದರ ಸಂಖ್ಯೆ ಕಡಿಮೆಯಾಗುತ್ತಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.