ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಗಣಿ ಓಡುಹುಳು

ಪ್ರತೃತಿಯಲ್ಲಿ ಸಾವಯವ ವಸ್ತುಗಳು ಪುನಾರವರ್ತನೆಗೆ ಒಳಗಾಗುತ್ತದೆ. ಹೀಗೆ ಆಗದಿದ್ದರೆ ನಮ್ಮ ಪರಿಸರ ನಿಂತನೀರಾಗುತ್ತಿತ್ತು. ನಾವು ತಿಂದು ಉಳಿದ ಆಹಾರವನ್ನೆ ತೆಗೆದುಕೊಳ್ಳಿ ಅದನ್ನು ಕಾಗೆ, ಇರುವೆ ಮುಂತಾದ ಪಕ್ಷಿ ಪ್ರಾಣಿಗಳು ತಿಂದು ಇನ್ನಷ್ಟು ಮುರಿಯುವಂತೆ ಮಾಡುತ್ತವೆ, ನಂತರ ಸೂಕ್ಷ್ಮ ಜೀವಿಗಳು ಇನ್ನಷ್ಟು ಮುರಿದು ಕೊನೆಯದಾಗಿ ಮೂಲಧಾತುವಾಗಿ ಪರಿಸರಕ್ಕೆ ಸೋರಿ ಮತ್ತೆ ಪುನರಾವರ್ತನೆಗೊಳ್ಳುತ್ತವೆ.