ವಿಷಯಕ್ಕೆ ಹೋಗಿ

ಹಾರುವ ಓತಿ

ಪೂರ್ಣ ಚಂದ್ರ ತೇಜಸ್ವಿಯವರ 'ಕರ್ವಾಲೋ' ಕಾದಂಬರಿಯಲ್ಲಿ ಬರುವ ಹಾರುವ ಓತಿ Reptelia ವರ್ಗಕ್ಕೆ ಸೇರಿದ Draco ಎಂಬ Genusನ ಒಂದು ಪ್ರಭೇಧ. ಜಗತ್ತಿನಲ್ಲಿ ಇದುವರೆವಿಗೂ ಸುಮಾರು ನಲವತ್ತಮೂರು ಪ್ರಭೇಧಗಳ ಹಾರು ಓತಿಯನ್ನು ಗುರುತಿಸಲಾಗಿದೆ. ಈ ಎಲ್ಲಾ ಪ್ರಭೇಧಗಳೂ ಭಾರತದ ಪಶ್ಚಿಮ ಘಟ್ಟದಿಂದ ಹಿಡಿದು ಈಶಾನ್ಯ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಮ್, ಕಾಂಬೋಡಿಯಾ, ಚೀನಾದ ದಕ್ಷಿಣ ಭಾಗ, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಹರಡಿಕೊಂಡಿದೆ.


ಪಶ್ಚಿಮ ಘಟ್ಟದ ಹೆಚ್ಚಿನ ಎಲ್ಲಾ ಭಾಗ ಮತ್ತು ಪೂರ್ವ ಘಟ್ಟಗಳ ಕೆಲವು ಭಾಗಗಳಲ್ಲಿ ಮಾತ್ರ ಕಾಣುವ ಏಕೈಕ ಪ್ರಭೇಧ Draco dussumieri. ಕರ್ನಾಟಕದಲ್ಲಿ ಸ್ಥಳೀಯವಾಗಿ 'ಹಾರುವ ಓತಿ' (ನಿಜವಾಗಿಯೂ ಅವು ಹಾರುವುದಿಲ್ಲ, ತಮ್ಮ ಪೊರೆಯಂತಹ ತೊಗಲಿನ ಸಹಾಯದಿಂದ ಗಾಳಿಯಲ್ಲಿ ತೇಲುತ್ತವೆ) ಎಂದೇ ಕರೆಸಿಕೊಳ್ಳುವ ಇದು IUCN Red Listನಂತೆ (ಜಾಗತಿಕವಾಗಿ ಜೀವಿ ಪ್ರಭೇಧವೊಂದರ ಸಂರಕ್ಷಣಾ ಸ್ಥಿತಿಯನ್ನು ತಿಳಿಸುವ ಪಟ್ಟಿ) Least Concern ಆಗಿದೆ.

ಗಂಡು ಹಾರು ಓತಿ ತನ್ನ ವಾಸಕ್ಷೇತ್ರ ಕಾಯ್ದುಕೊಳ್ಳುವ ಬಗ್ಗೆ ಆಕ್ರಮಣಕಾರಿಯಾಗಿರುತ್ತದೆ. ಹಲವು ಹೆಣ್ಣುಗಳ ವಾಸಕ್ಷೇತ್ರಗಳನ್ನು ಒಳಗೊಂಡ ಗಂಡು ಓತಿಯ ವಾಸಕ್ಷೇತ್ರ ಹಲವಾರು ಮರಗಳನ್ನು ಒಳಗೊಂಡಿರುತ್ತದೆ. ಗಂಡು ಓತಿಯು ತನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಬರುವುದಿಲ್ಲ. ಆದರೆ ಹೆಣ್ಣು ಓತಿ ಮೊಟ್ಟೆಗಳನ್ನಿಡಲು ನೆಲದ ಮೇಲೆ ಬರುತ್ತವೆ. ಹೆಣ್ಣು ಓತಿಗೆ ಇದು ಒಂದು ಅಪಾಯಕಾರಿ ಸನ್ನಿವೇಷ.


ನನಗೊಮ್ಮೆ ಹಾರುವ ಓತಿಯನ್ನು ಸಮೀಪದಿಂದ ಗಮನಿಸುವ ಅವಕಾಶ ದೊರಕಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುತ್ತಾಡುವಾಗ ಒಂದು ಮರದ ಹತ್ತಿರ ಊಟ ಮಾಡಲು ಕುಳಿತಿದ್ದೆ. ಆ ಮರದಲ್ಲೊಂದು ಹಾರು ಓತಿ ಕೀಟಗಳನ್ನು ಹಿಡಿಯುತ್ತಾ ಮೇಲೆ ಹತ್ತುತ್ತಿತ್ತು. ಹೀಗೆಯೆ ತುಂಬಾ ಮೇಲೇರಿದ ನಂತರ ಮತ್ತೊಂದು ಮರದ ಬುಡಕ್ಕೆ ತನ್ನ ರೆಕ್ಕೆಗಳ ಸಹಾಯದಿಂದ ತೇಲುತ್ತಾ ಇಳಿಯಿತು.


ಪಶ್ಚಿಮ ಘಟ್ಟಗಳು ಇಂದು ಛಿದ್ರವಾಗುತ್ತಿವೆ. ಎಂದೂ ನೆಲದ ಮೇಲೆ ಬಾರದ ಓತಿಗಳ ಆವಾಸ ಸ್ಥಾನ ದ್ವೀಪಗಳಂತಾಗುತ್ತಿವೆ. ಅದು ಶಾಶ್ವತವಾಗಿ ಮರೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.
















ತಾನು ಕುಳಿತ ಮರದಲ್ಲಿ ಸಾಮಾನ್ಯವಾಗಿ ಶತ್ರುಗಳ ಕಣ್ಣಿಗೆ ಬೀಳದಂತೆ ಮರದ ಬಣ್ಣದೊಡನೆ ಲೀನವಾಗುತ್ತಾದರೂ, ಅವುಗಳ ರೆಕ್ಕೆಗಳ ಬಣ್ಣ ರಂಗು ರಂಗಾಗಿರುತ್ತವೆ.













ಗಲ್ಲದ ಕೆಳಗೆ ಹಳದಿ ಚರ್ಮವಿದ್ದು, ಅದನ್ನು ಮೇಲೆ ಕೆಳಗೆ ಮಾಡುವುದರ ಮೂಲಕ ತನ್ನ ಇರುವಿಕೆಯನ್ನು ತಿಳಿಸುತ್ತವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.