ವಿಷಯಕ್ಕೆ ಹೋಗಿ

ಮಂದಾರ


ಮಂದಾರ ಪುಷ್ಪ
ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ
ಮರಕ್ಕೆ ಬೆಂಕಿ ಬಿದ್ದಿರುವಂತೆ ಭಾಸವಾಗುತ್ತದೆ. ಹಾಗಾಗಿ ಇಂತಹ ಮರಗಳನ್ನು ಕಾಡಿನ ಬೆಂಕಿ ಎಂದು ಕರೆಯುತ್ತಾರೆ. ಅಂತಹ ಗುಂಪಿಗೆ ಸೇರಿದ ಒಂದು ಮರವೆ ಮಂದಾರ.

Erythrina Strictaಮಂದಾರದ ವೈಜ್ಙಾನಿಕ ಹೆಸರು. ಇದನ್ನು ಸಾಮಾನ್ಯವಾಗಿ, ಕಾರ್ಕಿ ಕೋರಲ್ ಟ್ರೀ ಎಂದು ಇಂಗ್ಲೀಷಿನಲ್ಲಿ, ಪಾರಿಭದ್ರ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಕನ್ನಡದಲ್ಲಿ ಇನ್ನು ಕೆಲವು ಹೆಸರುಗಳುಂಟು ಅವು ಹಲಿವಾಣ, ಕೀಚಿಗೆ ಎಂದು. Erythrina ಗುಂಪಿನ ಮರಗಳನ್ನು ಪ್ರಪಂಚದಲ್ಲಿಯೆ ಸುಂದರ ಮರಗಳಲ್ಲೊಂದು ಎಂದು ಪರಿಗಣಿಸಲಾಗಿದೆ.


ಮಂದಾರದ ಎಲೆಗಳು
ಮಂದಾರದ ಮುಳ್ಳು
ಮಂದಾರ ಭಾರತದ ನಗರ, ಹಳ್ಳಿಗಳ ಹೊರವಲಯಗಳಲ್ಲಿ ಮತ್ತು ಕಾಡುಗಳಲ್ಲಿ ಬೆಳೆಯುತ್ತದೆ. ಸಂಪೂರ್ಣವಾಗಿ ಬೆಳೆದ ಮರ ಸುಮಾರು ೧೨ ಮೀನಷ್ಟು ಎತ್ತರ ವಿರುತ್ತದೆ. ಈ ಮರದ ತೊಗಟೆಯ ಮೇಲೆ ಚಿಕ್ಕ ಮುಳ್ಳುಗಳಿರುತ್ತವೆ. ಎಲೆಗಳು ಸಂಕೀರ್ಣವಾಗಿದ್ದು ಮೂರು ಉಪಎಲೆಗಳನ್ನು ಹೊಂದಿರುತ್ತವೆ. ಎಲೆಗಳ ಸಮೂಹ ಒತ್ತಾಗಿರದೆ ವಿರಳವಾಗಿರುತ್ತದೆ. ಇವುಗಳ ಹೂವು ನೋಡಲು ಆಕರ್ಷಕವಾಗಿದ್ದು ಕೆಂಪು ,ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ ಮತ್ತು ಒತ್ತೊತ್ತಾಗಿ ಗೊಂಚಲು ಗಳಲ್ಲಿರುತ್ತದೆ. ಒಂದು ಹೂವಿನಲ್ಲಿ ಐದು ಎಸಳುಗಳಿರುತ್ತವೆ. ಕಾಯಿ ಹುರುಳಿ ರೀತಿಯಲ್ಲಿದ್ದು ಒಣಗಿದಾಗ ಕೆಂಪು ಬೀಜಗಳನ್ನು ಹೊಂದಿರುತ್ತದೆ.


ತೊಗಟೆ
ಚಳಿಗಾಲದ ಅಂತ್ಯ ಅಥವಾ ಬೇಸಿಗೆಯ ಪ್ರಾರಂಭದಲ್ಲಿ ಎಲೆಗಳು ಉದುರುತ್ತವೆ. ಇದೆ ಸಮಯದಲ್ಲಿ ಹೂಗಳು ಸಹ ಅರಳುತ್ತವೆ. ಮೇ ಇಂದ ಜುಲೈವರೆಗು ಕಾಯಿಗಳನ್ನು ಹೊಂದುತ್ತವೆ.


ಮಂದಾರ ಪುಷ್ಪ ಅನೇಕ ಪಕ್ಷಿಗಳನ್ನು ಮತ್ತು ಕೀಟಗಳನ್ನು ಆಕರ್ಷಿಸುತ್ತದೆ. ಹೀಗಾಗಿ ಇವುಗಳ ಇರುವಿಕೆ ಪರಿಸರದ ಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಇದರಿಂದ ರೈತರಿಗು ಪ್ರಯೋಜನವಾಗುತ್ತದೆ. ಇದರ ಎಲೆಯನ್ನು ಮೇವಿಗಾಗಿ ಸಹ ಬಳಸಬಹುದು. ಇದು ದೇಶೀಯ ಮರವಾದ್ದರಿಂದ ಅನೇಕ ದೇಶೀಯ ವೈದ್ಯ ಪದ್ಧತಿಯಲ್ಲು ಇದರ ಬಳಕೆಯುಂಟು.

ಕಾಮೆಂಟ್‌ಗಳು

  1. ನಮಸ್ಕಾರ. ಈ ಮರಕ್ಕೆ ಕನ್ನಡ ದಲ್ಲಿ ಪ್ರಮುಖ ವಾಗಿ ಮುತ್ತುಗಳ ಮರ ಎಂದು ಕರೆಯುತ್ತಾರೆ. ಪಾಲಾಶ ಎಂಬ ಹೆಸರೂ ಇದೆ.
    ನೀವು ತಿಳಿಸಿದಂತೆ ಮಂದಾರ ಎಂಬುದು ಈ ವರ್ಗದಲ್ಲಿ ಅಪರಿಚಿತ. ಮಂದಾರ ಪುಷ್ಪ ಗಿಡ, ವೃಕ್ಷ ವಲ್ಲ.
    ಈ ಮರದ ಎಲೆಗಳು ಉತ್ತರ ಕರ್ನಾಟಕದಲ್ಲು ಪ್ರಸಿದ್ಧ, ಮುಖ್ಯವಾಗಿ ಪತ್ರಾವಳಿಯಾಗಿ ಉಪಯುಕ್ತ. ಅಲ್ಲಿಯೂ ಮುತ್ತುಗ ಎಂದೇ ಹೇಳುತ್ತಾರೆ.
    ದಯವಿಟ್ಟು ನಿಮ್ಮ ಬರಹ ಪರಿಶೀಲಿಸಿ.
    Aadityachandra2007@rediffmail.com

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.